ಕೊರೆನೋ ಮಹಾಮಾರಿಯನ್ನು ಹತೋಟಿಗೆ ತರಲು ಶಾಸಕರ ಮನೆಯಲ್ಲಿ ಭಜನೆ

8:37 PM, Sunday, March 22nd, 2020
Share
1 Star2 Stars3 Stars4 Stars5 Stars
(No Ratings Yet)
Loading...

Vedvyas Kamathಮಂಗಳೂರು : ಕೊರೆನೋ ಭೀತಿ ನಿವಾರಣೆಗಾಗಿ ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಅವರು ತಮ್ಮ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಭಜನೆಯ ಮಾಡುವ ಮೂಲಕ ದೇವರ ಮೊರೆ ಹೋದರು‌.

ಈಗಾಗಲೇ ವೈದ್ಯರು ಕೊರೆನೋ ವೈರಸ್ ತಡೆಗಟ್ಟಲು ಹರ ಸಾಹಸ ಪಡುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ದೇವರ ಕೃಪಾಕಟಾಕ್ಷ ಮತ್ತು ವೈದ್ಯರ ಶ್ರಮ ಎರಡರಿಂದ ಮಾತ್ರವೇ ಈ ಮಹಾಮಾರಿಯನ್ನು ಹತೋಟಿಗೆ ತರಬಹುದು ಎಂದು ಶಾಸಕರು ಹೇಳಿದ್ದಾರೆ.

ವೈದ್ಯಕೀಯ ಜಗತ್ತಿಗೂ ಸವಾಲಾಗಿರುವ ಕೊರೆನೋ ನಿವಾರಣೆಗೆ ಭಗವಂತನ ಕೃಪಾ ಕಟಾಕ್ಷವೂ ಬೇಕಿದೆ. ಹಾಗಾಗಿ ಇಂದು ಕುಟುಂಬದ ಸದಸ್ಯರ ಜೊತೆಗೆ ಭಜನೆಯ ಮೂಲಕ ಜಗತ್ತಿಗೆ ಬಂದಿರುವ ಕಂಟಕ ಕಳೆಯಲು ಭಜನೆಯ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು ಎಂದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English