ಮಂಗಳೂರು ಮೀನುಗಾರಿಕೆ ಸಂಪೂರ್ಣ ಸ್ಥಗಿತ, ಹಿಡಿದ ಮೀನನ್ನು ಸಮುದ್ರಕ್ಕೆ ಚೆಲ್ಲಿದ ಮೀನುಗಾರ

5:17 PM, Friday, March 27th, 2020
Share
1 Star2 Stars3 Stars4 Stars5 Stars
(No Ratings Yet)
Loading...

Fishಮಂಗಳೂರು:  ನಗರದ ಪ್ರಮುಖ ದಕ್ಕೆಯ ಮೀನುಗಾರಿಕಾ ಪ್ರದೇಶ ಕೋವಿಡ್‌ 19 ಆತಂಕದ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿದೆ.   ಮೀನುಗಾರಿಕೆ ಗುರುವಾರ ದಿಂದ ಸಂಪೂರ್ಣ ಸ್ಥಗಿತಗೊಂಡಿದೆ.

ದಕ್ಕೆಯಲ್ಲಿ ಜನ ಸೇರದಂತೆ ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿದ್ದು, ದಕ್ಕೆಯಲ್ಲಿ ಬಂದ್‌ ವಾತಾವರಣವಿದೆ. ಬುಧವಾರ ತಂದ ಮೀನನ್ನು ಮಾರಾಟ ಮಾಡಲಾಗದೆ ಬಹುತೇಕರು ಕಡಲಿಗೆ ಚೆಲ್ಲಿದ ಘಟನೆ ನಡೆದಿದೆ. ಹಿಡಿದ ಬೆಲೆಬಾಳುವ ಮೀನ‌ನ್ನು ಕಡಲಿಗೆ ಚೆಲ್ಲುವ ಸನ್ನಿವೇಶ ಇದೇ ಮೊದಲು ಎಂದು ಮೀನುಗಾರರು ತಿಳಿಸಿದ್ದಾರೆ. ಈ ಮಧ್ಯೆ ಜಿಲ್ಲಾಧಿಕಾರಿಯವರ ವಿಶೇಷ ಅನುಮತಿ ಪಡೆದ ಕೆಲವು ಮೀನುಗಾರರು ಮೀನನ್ನು ಫಿಶ್‌ ಮೀಲ್‌ಗ‌ಳಿಗೆ ಬುಧವಾರ ಸಂಜೆ ಸಾಗಿಸಿದ್ದಾರೆ.

ಬೋಟುಗಳೆಲ್ಲ ದಕ್ಕೆಗೆ ವಾಪಸಾಗಿದ್ದು, ಬಂದರು ಬಹುತೇಕ ಸ್ತಬ್ಧವಾಗಿದೆ. ದಕ್ಕೆಯಲ್ಲಿ ಚಟುವಟಿಕೆಗೆ ಸಂಪೂರ್ಣ ಸ್ಥಗಿತ ಗೊಂಡಿದೆ. ಶುಕ್ರವಾರದಿಂದ ಜನರಿಗೆ ಮೀನು ಸಿಗುವುದು ಅನುಮಾನ.

ಕೋವಿಡ್‌ 19 ಕಾರಣದಿಂದ ಜನಜೀವನ ಸ್ತಬ್ಧವಾದ ಹಿನ್ನೆಲೆಯಲ್ಲಿ ಮೀನುಗಾರಿಕೆಗೆಂದು ತೆರಳಿದ್ದ ಮೀನುಗಾರರನ್ನು ವಾಪಸ್‌ ಬರುವಂತೆ ಈ ಹಿಂದೆಯೇ ತಿಳಿಸಲಾಗಿತ್ತು. ರವಿವಾರದಿಂದ ಬೋಟ್‌ಗಳು ವಾಪಸಾ ಗುವುದಕ್ಕೆ ಆರಂಭಿಸಿದ್ದವು. ಮಂಗಳವಾರದ ವರೆಗೆ ಸುಮಾರು 400ರಷ್ಟು ಬೋಟುಗಳು ದಕ್ಕೆಗೆ ಆಗಮಿಸಿ ನಿಲುಗಡೆಗೊಂಡಿದ್ದರು ಮಂಗಳವಾರ ಈ ಸಂಖ್ಯೆ ಅಧಿಕವಿತ್ತು. ಹೀಗಾಗಿ ದಕ್ಕೆಯಲ್ಲಿ ಮೀನುಗಾರರು, ಮಾರಾಟಗಾರರು ಮತ್ತು ಗ್ರಾಹಕರ ಜನಜಂಗುಳಿ ಏರ್ಪಟ್ಟಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ದಕ್ಕೆ ಬಂದ್‌ ಮಾಡುವಂತೆ ಮೀನುಗಾರಿಕೆ ಇಲಾಖೆಗೆ ಸೂಚಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English