ಹಿಂದೆ ಪ್ರಕೃತಿ
ನಳನಳಿಸುತಿತ್ತು
ಇಂದು ವಿಕೃತಿ.
ಯಾರದ್ದೋ ತಪ್ಪು
ಯಾರು ಯಾರಿಗೋ ಶಿಕ್ಷೆ
ಇದು ನ್ಯಾಯವೇ.
ಎಲ್ಲಿತ್ತೋ ಏನೋ
ಜಗತ್ತನ್ನೆ ನುಂಗಲು
ಬಂತು ಕರೋನಾ.
ತಾಯಿಯ ರೂಪ
ದೇವರ ಪ್ರತಿರೂಪ
ಎರಡೂ ಒಂದೇ.
ಸ್ವಯಂ ಸ್ವಚ್ಛತೆ
ಕರೋನಾ ತಡೆಯುತ್ತೆ
ನಿನ್ನ ಜಾಗೃತೆ.
ಕನಸುಗಳು
ಗುರಿ ಮುಟ್ಟಲು ದಿಟ
ಸಾಧನಗಳು.
ಕನಸುಗಳು
ಕಾಣದೆಯೇ ಮೂಡುವ
ವಿಸ್ಮಯಗಳು.
ತ್ಯಾಗದ ದೀಪ
ಇವಳಿಗಿಲ್ಲ ಕೋಪ,
ಹೆಣ್ಣಲ್ಲಾ ಶಾಪ.
ಅಮ್ಮನ ಪ್ರೇಮ
ಎಲ್ಲೆಲ್ಲಿಯೂ ಸಿಗದ
ಅಮೃತದಂತೆ.
ಏನು ಚೆಂದವೋ
ಸೂರ್ಯನ ಕಿರಣವು
ಪ್ರತಿ ಮುಂಜಾವು.
ಗುರು ಬಾಳಿಗೆ
ದೇವತಾ ಮನುಷ್ಯನು
ಜೀವನ ಶಿಲ್ಪಿ.
✍
ಮಂಜುನಾಥ ಗುತ್ತೇದಾರ.
ಸಾ//ದೇವಸೂಗೂರು.
ತಾ//ಜಿ//ರಾಯಚೂರು.
ಮೋ.ನಂ 9632759691
ಇಮೇಲ್ – manjunatha071@gmail
Click this button or press Ctrl+G to toggle between Kannada and English
April 13th, 2020 at 08:30:10
ಮಂಜುನಾಥ್ ಗುತ್ತೇದಾರ ತುಂಬಾ ಅದ್ಭುತವಾದ ರೀತಿಯಲ್ಲಿ ಹೈಕು ಗಳು ಬರೆಯುವ ಉತ್ತಮ ಬರಹಗಾರ, ಪ್ರಸ್ತುತದಲ್ಲಿ ಇರುವ ಸಮಸ್ಯೆಗಳ ಅತ್ತ ತನ್ನ ಬರಹದ ಮೂಲಕ ಧ್ವನಿಯಾಗಿ ನಿಂತ್ತಿರುವುದು ಹೈಕುಗಳಲ್ಲಿ ಕಂಡುಬರುತ್ತಿದೆ, ಸೂಪರ್