ಸಮಾನತೆಯ ಹರಿಕಾರ ಬಾಬಾ ಸಾಹೇಬ್ ಅಂಬೇಡ್ಕರ ಜಯಂತಿ

12:32 AM, Tuesday, April 14th, 2020
Share
1 Star2 Stars3 Stars4 Stars5 Stars
(No Ratings Yet)
Loading...

Ambedkar

ಭವ್ಯ ಭಾರತ ದೇಶದಲುಟ್ಟಿದ
ದೀನ ದಲಿತರ ಆಶಾಕಿರಣ
ದೇಶ ಸಮಾನತೆಯ ಹರಿಕಾರ
ಬಾಬಾ ಸಾಹೇಬ್ ಅಂಬೇಡ್ಕರ. //1//

ಮಹಾರಾಷ್ಟ್ರದ ರತ್ನಗಿರಿಯ
ಅಂಬೇವಾಡಿ ಗ್ರಾಮದಲಿ
ರಾಮ್ ಜೀ – ಭೀಮಾಬಾಯಿಯ
ಉದರದಿ ಜನ್ಮಿಸಿ ಬಂದ
ಬಾಬಾ ಸಾಹೇಬ್ ಅಂಬೇಡ್ಕರ. //2//

ದೇಶದ ಸುಭದ್ರತೆ ಕಲ್ಪಿಸಿಕೊಂಡು
ದೀನ ದಲಿತರ ರಕ್ಷಣೆಗೆಂದು,
ಬರೆದೆ ಬಿಟ್ಟರು ದೇಶಕ್ಕೊಂದು
ನೆಚ್ಚಿನ ಸಂವಿಧಾನವೊಂದು
ಬಾಬಾ ಸಾಹೇಬ್ ಅಂಬೇಡ್ಕರ. //3//

ದೀನ ದಲಿತರ ಬಾಳಿನ ಜ್ಯೋತಿ
ದೇಶ ವಿದೇಶದಿ ಪಡೆದರು ಖ್ಯಾತಿ,
ದೇಶದಲ್ಲಿದ್ದ ಜಾತಿಯ ಕಲಹ
ಹೊಡೆದುರುಳಿಸಿದ ಏಕವೀರ
ಬಾಬಾ ಸಾಹೇಬ್ ಅಂಬೇಡ್ಕರ. //4//

ಗೌತಮ ಬುದ್ಧನ ಆದರ್ಶ ಪಾಲಿಸಿ
ಭಾರತದಲಿ ತನ್ನದೇ ತತ್ವಗಳ ಬಿತ್ತಿ
ಜಗಕೆ ತೋರಿದ ಸಮಾನತೆ ಎತ್ತಿ
ನಿಮಗೆ ಮುಗಿವೆವು ಕರವೆತ್ತಿ
ದೀನ ದಲಿತರ ಆಶಾಕಿರಣ
ಬಾಬಾ ಸಾಹೇಬ್ ಅಂಬೇಡ್ಕರ. //5//

Manjunath

 

✍ ಮಂಜುನಾಥ ಗುತ್ತೇದಾರ.
ಸಾ//ದೇವಸೂಗೂರು.
ತಾ//ಜಿ//ರಾಯಚೂರು.
ಮೋ.ನಂ. 9632759691
ಇಮೇಲ್ : manjunatha071@gmail

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English