ಭವ್ಯ ಭಾರತ ದೇಶದಲುಟ್ಟಿದ
ದೀನ ದಲಿತರ ಆಶಾಕಿರಣ
ದೇಶ ಸಮಾನತೆಯ ಹರಿಕಾರ
ಬಾಬಾ ಸಾಹೇಬ್ ಅಂಬೇಡ್ಕರ. //1//
ಮಹಾರಾಷ್ಟ್ರದ ರತ್ನಗಿರಿಯ
ಅಂಬೇವಾಡಿ ಗ್ರಾಮದಲಿ
ರಾಮ್ ಜೀ – ಭೀಮಾಬಾಯಿಯ
ಉದರದಿ ಜನ್ಮಿಸಿ ಬಂದ
ಬಾಬಾ ಸಾಹೇಬ್ ಅಂಬೇಡ್ಕರ. //2//
ದೇಶದ ಸುಭದ್ರತೆ ಕಲ್ಪಿಸಿಕೊಂಡು
ದೀನ ದಲಿತರ ರಕ್ಷಣೆಗೆಂದು,
ಬರೆದೆ ಬಿಟ್ಟರು ದೇಶಕ್ಕೊಂದು
ನೆಚ್ಚಿನ ಸಂವಿಧಾನವೊಂದು
ಬಾಬಾ ಸಾಹೇಬ್ ಅಂಬೇಡ್ಕರ. //3//
ದೀನ ದಲಿತರ ಬಾಳಿನ ಜ್ಯೋತಿ
ದೇಶ ವಿದೇಶದಿ ಪಡೆದರು ಖ್ಯಾತಿ,
ದೇಶದಲ್ಲಿದ್ದ ಜಾತಿಯ ಕಲಹ
ಹೊಡೆದುರುಳಿಸಿದ ಏಕವೀರ
ಬಾಬಾ ಸಾಹೇಬ್ ಅಂಬೇಡ್ಕರ. //4//
ಗೌತಮ ಬುದ್ಧನ ಆದರ್ಶ ಪಾಲಿಸಿ
ಭಾರತದಲಿ ತನ್ನದೇ ತತ್ವಗಳ ಬಿತ್ತಿ
ಜಗಕೆ ತೋರಿದ ಸಮಾನತೆ ಎತ್ತಿ
ನಿಮಗೆ ಮುಗಿವೆವು ಕರವೆತ್ತಿ
ದೀನ ದಲಿತರ ಆಶಾಕಿರಣ
ಬಾಬಾ ಸಾಹೇಬ್ ಅಂಬೇಡ್ಕರ. //5//
✍ ಮಂಜುನಾಥ ಗುತ್ತೇದಾರ.
ಸಾ//ದೇವಸೂಗೂರು.
ತಾ//ಜಿ//ರಾಯಚೂರು.
ಮೋ.ನಂ. 9632759691
ಇಮೇಲ್ : manjunatha071@gmail
Click this button or press Ctrl+G to toggle between Kannada and English