ಖಾಸಗಿ ಬಸ್‌ ಓಡುವ ಮಾರ್ಗದಲ್ಲಿ ಸರಕಾರಿ ಬಸ್‌ ಸಂಚಾರ ಬೇಡ

10:44 PM, Friday, May 29th, 2020
Share
1 Star2 Stars3 Stars4 Stars5 Stars
(No Ratings Yet)
Loading...

tumakuru busತುಮಕೂರು : ಲಾಕ್‌ ಡೌನ್‌ ಘೋಷಣೆಯಾದ ಮಾರ್ಚ್ 24 ರಿಂದ ಖಾಸಗಿ ಬಸ್‌ ಗಳು ರಸ್ತೆಗಿಳಿದಿಲ್ಲ ನಾವೆಲ್ಲರೂ ಸಂಕಷ್ಟದಲ್ಲಿದ್ದೇವೆ ಎಂದು ಖಾಸಗಿ ಬಸ್‌ ಮಾಲೀಕರ ಸಂಘದವರು ಗೋಳು ತೋಡಿಕೊಂಡಿದ್ದಾರೆ.

ತಮ್ಮ ಹಲವಾರು ಬೇಡಿಕೆಗಳನ್ನು ಸರಕಾರದ ಮುಂದೆ ಸಲ್ಲಿಸಿರುವ ಖಾಸಗಿ ಬಸ್‌ ಮಾಲೀಕರು ತಮ್ಮ ಬೇಡಿಕೆ ಈಡೇರಿಕೆಯ ಬಗ್ಗೆ ಸರಕಾರದಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

ಅವರ ಬೇಡಿಕೆಗಳೆಂದರೆ :
ಖಾಸಗಿ ಬಸ್‌ ಸಂಚಾರಕ್ಕೆ ಸೂಕ್ತ ಮಾರ್ಗಸೂಚಿ ರೂಪಿಸಬೇಕು.ಡಿಸೆಂಬರ್‌ ವರೆಗೆ ತೆರಿಗೆ ಪಡೆಯಲು ವಿನಾಯಿತಿ ನೀಡಬೇಕು. ಡಿಸೆಂಬರ್‌ ನಂತರ ಶೇ.50 ರಷ್ಟು ತೆರಿಗೆ ಪಡೆಯಲು ಅವಕಾಶ ನೀಡಬೇಕು. ಬಸ್‌ ಸಿಬ್ಬಂದಿಯ ಸಂಬಳವನ್ನು ಸರಕಾರವೇ ಭರಿಸಬೇಕು. ಕೆಎಸ್ಸಾರಿಟಿಸಿ ಬಸ್‌ ಗಳ ಪ್ರಯಾಣ ದರ ಪೈಪೋಟಿ ನಿಲ್ಲಬೇಕು. ಖಾಸಗಿ ಬಸ್‌ ಸಂಚರಿಸುವ ಮಾರ್ಗದಲ್ಲಿ ಕೆಸ್ಸಾರಿಟಿಸಿ ಬಸ್‌ ಸಂಚಾರ ನಿಲ್ಲಿಸಬೇಕು. ಹಾಗೂ ಪೊಲೀಸರಿಂದ ಅನಗತ್ಯವಾಗಿ ಕೇಸ್‌ ಹಾಕದಂತೆ ನೋಡಿಕೊಳ್ಳಬೇಕೆಂದು ಮನವಿಯಲ್ಲಿ ಕೋರಿದ್ದಾರೆ.

ಸರಕಾರದ ಮಾರ್ಗಸೂಚಿಯಂತೆ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಕೇವಲ ೩೦ ಪ್ರಯಾಣಿಕರು ಮಾತ್ರ ಬಸ್ಸಿನಲ್ಲಿ ಪ್ರಯಾಣ ಮಾಡಬೇಕು. ಆದರೆ ಹಳ್ಳಿಯ ಜನರು ಮಾಸ್ಕ್‌ ಧರಿಸುವಂತೆ ಒತ್ತಾಯಿಸಿದರೂ ಅವರು ನಿಯಮ ಪಾಲಿಸುತ್ತಾರೆ ಎಂಬುದು ಗ್ಯಾರಂಟಿ ಇಲ್ಲ. ಇನ್ನು ಕೆಲವರು ಮಾರ್ಗ ಮಧ್ಯೆ ಇಳಿಯುವುದು ಹತ್ತುವುದು ಮಾಡುತ್ತಾರೆ. ಇಂತಹ ಹಲವಾರು ಸಮಸ್ಯೆಗಳಿಗೆ ಸರಕಾರವೇ ಹೊಸ ಮಾರ್ಗಸೂಚಿ ರಚಿಸಿ ಆಗುತ್ತಿರುವ ನಷ್ಟ ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English