ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿರುವ ಕಾಡುಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ 15 ಕಾಡುಕುರಿಗಳು ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಮಳೆಗೆ ನಿಸರ್ಗಧಾಮದ ತಡೆಗೋಡೆಗೆ ಮರ ಬಿದ್ದಿದ್ದು ಅದನ್ನು ಉಪಯೋಗಿಸಿ ಡಂಪಿಂಗ್ ಯಾರ್ಡ್ ನಿಂದ ಜಿಗಿದು ಬೀದಿ ನಾಯಿಗಳು ನಿಸರ್ಗಧಾಮದ ಒಳಗೆ ಬಂದಿದ್ದು, ಕಾಡುಕುರಿಗಳ ಮೇಲೆ ದಾಳಿ ಮಾಡಿದೆ. ಕಾಡುಕುರಿಗಳ ಕುತ್ತಿಗೆ ಭಾಗಕ್ಕೆ ತೀವ್ರ ಗಾಯವಾದ ಕಾರಣ 15 ಕಾಡುಕುರಿಗಳು ಸಾವನ್ನಪ್ಪಿದೆ. ಎರಡು ಕಾಡುಕುರಿಗಳಿಗೆ ಗಾಯವಾಗಿದೆ ಎಂದು ವರದಿಯಾಗಿದೆ.
ಇಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ತಡೆಗೋಡೆ ನಿರ್ಮಾಣವಾದರೆ ಬೀದಿನಾಯಿಗಳು ಒಳ ಪ್ರವೇಶಿಸುವುದನ್ನು ತಡೆಯಬಹುದು ಎನ್ನಲಾಗಿದೆ.
ಈ ಬಗ್ಗೆ ನಿಸರ್ಗಧಾಮದ ನಿರ್ದೇಶಕ ಜಯಪ್ರಕಾಶ್ ಬಂಢಾರಿ ಸ್ಪಷ್ಟನೆ ನೀಡಿದ್ದು, ಬೀದಿನಾಯಿಗಳ ದಾಳಿಗೆ ಕಾಡುಕುರಿಗಳು ಸಾವನ್ನಪ್ಪಿದ್ದು, ಜಿಂಕೆಗಳಲ್ಲ. ಅವುಗಳೆರಡು ನೋಡಲು ಒಂದೇ ರೀತಿ ಇರುವ ಕಾರಣ ಗೊಂದಲ ಉಂಟಾಯಿತು ಎಂದಿದ್ದಾರೆ.
Click this button or press Ctrl+G to toggle between Kannada and English