ಬಸ್‌ ನಿಲ್ದಾಣದಲ್ಲಿ ಬಸ್ ಅಡಿ ಸಿಲುಕಿ ಕಂಡಕ್ಟರ್‌ ಸಾವು

4:39 PM, Saturday, December 1st, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Bus conductorಮಂಗಳೂರು :ಶುಕ್ರವಾರ ಬಿಜೈ ನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬಸ್ ಕಂಡಕ್ಟರ್ ಬಸ್ ನಡಿ ಸಿಲುಕಿ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ವಿರೂಪಾಕ್ಷ ಸಜ್ಜನ್ ಬೆಟಗೇರಿ ಕಳೆದ 12 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರು ಪ್ರಸ್ತುತ ಕೊಪ್ಪಳ ಜಿಲ್ಲೆಗೆ ಸೇರಿದ ಬಸ್ ನಲ್ಲಿ ಮಂಗಳೂರು -ಗಂಗಾವತಿ ನಡುವೆ ಸಂಚರಿಸುತ್ತಿದ್ದ ಬಸ್ ನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಎಂದಿನಂತೆ ಬಸ್ ಶುಕ್ರವಾರ ಮಂಗಳೂರಿಗೆ ಬಂದಿದ್ದು, ಸಂಜೆ ಹೊತ್ತಿಗೆ ಹೊರಡುವುದಿತ್ತು. ಬಸ್ ನ್ನು ಬಸ್ ನಿಲ್ದಾಣದ ಆವರಣದಲ್ಲಿ ನಿಲ್ಲಿಸಿದ್ದು ವಿರೂಪಾಕ್ಷ ಬಸ್ ನ ಅಡಿ ಭಾಗದಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಬಸ್ ಚಾಲಕನಿಗೆ ಈ ವಿಷಯ ತಿಳಿದಿರಲಿಲ್ಲ. ಬಸ್ ಚಾಲಕ ಮಧ್ಯಾಹ್ನ 3.30 ರ ವೇಳೆಗೆ ಡೀಸೆಲ್ ತುಂಬಿಸಲೆಂದು ಕುಂಟಿಕಾನ್ ನಲ್ಲಿರುವ ಕಾರ್ಯಾಗಾರಕ್ಕೆ ಕೊಂಡೊಯ್ಯಲು ಚಲಾಯಿಸಿದಾಗ ಬಸ್ ನ ಎಡಭಾಗದ ಮುಂಬದಿಯ ಚಕ್ರ ವಿರೂಪಾಕ್ಷರ ಮೇಲೆ ಚಲಿಸಿತು ಇದರಿಂದ ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸುವಸ್ಟರಲ್ಲಿ ಸಾವನ್ನಪ್ಪಿದರು ಎನ್ನಲಾಗಿದೆ. ಟ್ರಾಫಿಕ್ ಪೂರ್ವ ಠಾಣೆಯ ಪೊಲೀಸರು ಕೇಸು ದಾಕಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English