ಕ್ರೇಜಿ ಗೈಸ್ ಮಂಕಿಸ್ಟ್ಯಾಂಡ್ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ನೊಂದಣಿ ಹಾಗೂ ವಿತರಣೆ

11:09 PM, Sunday, October 11th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

crazy guys ಮಂಗಳೂರು  : ಕ್ರೇಜಿ ಗೈಸ್ ಮಂಕಿಸ್ಟ್ಯಾಂಡ್ ಮಂಗಳಾದೇವಿ ಇದರ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ನೊಂದಣಿ ಹಾಗೂ ವಿತರಣೆಯ ಶಿಬಿರವನ್ನು ಶಾಸಕ ವೇದವ್ಯಾಸ ಕಾಮತ್ ರವರು  ಅಕ್ಟೋಬರ್  11, ರವಿವಾರ ಮಂಗಳಾದೇವಿ ಬಳಿ ಇರುವ ಅಮರ್ ಆಳ್ವಾ ರಸ್ತೆಯ ಮಂಕಿಸ್ಟ್ಯಾಂಡ್  ಗ್ರೌಂಡ್ ನಲ್ಲಿ ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆಯ ಮುಖ್ಯ ಸಚೇತರಕರಾದ ಪ್ರೇಮಾನಂದ ಶೆಟ್ಟಿ ಜನಪದ ಪರಿಷತ್ ನ ಜಿಲ್ಲಾಧ್ಯಕ್ಷರಾದ ಪ್ರವೀಣ್ ಕೊಡಿಯಲ್ ಬೈಲ್ ಹಾಗೂ ಕ್ರೇಜಿ ಗೈಸ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬೆಳಗ್ಗೆಯಿಂದ ಸಂಜೆ ಯ ವರೆಗೆ ನಡೆದ ಕಾರ್ಯಕ್ರಮದಲ್ಲಿ ಸುಮಾರು 325 ಆಯುಷ್ಮಾನ್ ಕಾರ್ಡ್ ನೊಂದಣಿ ಹಾಗೂ ವಿತರಣೆ ನಡೆಯಿತು.

ಮಂಗಳಾದೇವಿ ದೇವಸ್ಥಾನ ರಥೋತ್ಸವದ ಸಮಯದಲ್ಲಿ  ಹುಲಿ ವೇಷ, ಮಂಗಳಾದೇವಿ ಸೇವಾ ಸಮಿತಿ ಗಣೇಶೋತ್ಸವ ಸಂದರ್ಭದಲ್ಲಿ ಬೆಳ್ಳಿಆರತಿ, ರಕ್ಷಾ ಬಂಧನ, ಸ್ವಾತಂತ್ರ್ಯ ದಿನಾಚರಣೆ, ರಕ್ತದಾನ ಶಿಬಿರ ಮೊದಲಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಕ್ರೇಜಿ ಗೈಸ್  ತಂಡ ಮಾಡಿಕೊಂಡು ಬಂದಿದೆ.

crazy guys

crazy guys

crazy guys

crazy guys

crazy guys

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English