ಗ್ರಾ.ಪಂ. ಚುನಾವಣೆಯ ಪಕ್ಷೇತರ ಅಭ್ಯರ್ಥಿ, ಆರ್‌ಟಿಐ ಕಾರ್ಯಕರ್ತ ನಾಪತ್ತೆ

10:54 PM, Sunday, December 20th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

missing ಕುಂದಾಪುರ : ಆರ್‌ಟಿಐ ಕಾರ್ಯಕರ್ತ ತನ್ನ ಕುಟುಂಬದ ಸದಸ್ಯರಾದ ಅಶೋಕ ಶೆಟ್ಟಿಗಾರ್‌ (49) ಹಾಗೂ ಅವರ ಪತ್ನಿ ಶ್ರೀನಿಧಿ (40), ಮಗ ಅಶ್ವಿ‌ನ್‌ (16), ಮಗಳು ಆಶಿಕಾ (14) ಅವರು ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಕಬ್ಬಿನಾಲೆಯಿಂದ  ಡಿ. 15ರಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಅಳಿಯ ಶಿವಕುಮಾರ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಶೋಕ್‌ ಶೆಟ್ಟಿಗಾರ್‌ ಅವರು ಗ್ರಾ.ಪಂ. ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ರಾಜಕೀಯ ಒತ್ತಡದಿಂದ ಚುನಾವಣೆ ಮುಗಿಯುವವರೆಗೆ ಬೇರೆಡೆ ಇರೋಣವೆಂದು ಹೋಗಿರಬಹುದೇ? ಅಥವಾ ರಾಜಕೀಯದಿಂದ ಅಪಹರಣ ಮಾಡಿರಬಹುದೇ ಎನ್ನುವ ದೃಷ್ಟಿಕೋನದಲ್ಲೂ ತನಿಖೆ ಸಾಗಿದೆ.

ಅವರ ಮೊಬೈಲ್‌ ಕೂಡ ಸ್ವಿಟ್ಚ್ಡ್ ಆಫ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಕ್ಕಪಕ್ಕದ ಮನೆಯವರಿಗಾಗಲಿ ಅಥವಾ ಸಂಬಂಧಿಕರಿಗಾಗಲಿ ಅವರು ನಾಪತ್ತೆಯಾಗಿದ್ದಾರೆಯೇ ಅಥವಾ ಎಲ್ಲಿಗಾದರೂ ಹೋಗಿದ್ದಾರೆಯೇ ಎನ್ನುವ ಖಚಿತ ಮಾಹಿತಿ  ಸಿಕ್ಕಿಲ್ಲ.

ಅಶೋಕ ಶೆಟ್ಟಿಗಾರ್‌ ಅವರ ಮನೆಗೆ ಡಿ. 15ರಿಂದ ಬೀಗ ಹಾಕಿರುವುದರಿಂದ ಅನುಮಾನಗೊಂಡ ಅಳಿಯ ಶಿವಕುಮಾರ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಮಕ್ಕಳಿಬ್ಬರು ಹಾಲಾಡಿಯ ಶಾಲೆಯೊಂದರ ಹೈಸ್ಕೂಲ್‌ ವಿದ್ಯಾರ್ಥಿಗಳಾಗಿದ್ದರು.

ಅಮಾಸೆಬೈಲು ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English