ಕೊರೊನಾ ಸೋಂಕಿತನ ಮೃತ ದೇಹವನ್ನು ತಾನೇ ಆಂಬುಲೆನ್ಸ್ ಚಲಾಯಿಸಿ ಸ್ಮಶಾನ ತಲುಪಿಸಿದ ಶಾಸಕ ರೇಣುಕಾಚಾರ್ಯ

9:17 PM, Tuesday, June 1st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

renukacharya ದಾವಣಗೆರೆ:   ಕೊರೊನಾ ಸೋಂಕಿತನ ಮೃತ ದೇಹ ವನ್ನು ಸ್ವತಃ ಆಂಬುಲೆನ್ಸ್ ಚಲಾಯಿಸಿಕೊಂಡು ಸ್ಮಶಾನಕ್ಕೆ ಕೊಂಡೊಯ್ದು ಶಾಸಕ ರೇಣುಕಾಚಾರ್ಯ ಸಂಸ್ಕಾರ ನಡೆಸಿದ ಘಟನೆ ಹೊನ್ನಾಳಿಯಲ್ಲಿ ನಡೆದಿದೆ.

ಕರೊನಾದಿಂದ ಮೃತಪಟ್ಟ ಯುವಕನ ದೇಹವನ್ನು ತರದಂತೆ ಗ್ರಾಮಸ್ಥರು ವಿರೋಧಿಸಿದ್ದರು. ಈ ವಿಷಯವನ್ನು ತಿಳಿದ ಶಾಸಕ ರೇಣುಕಾಚಾರ್ಯ ಅವರು ಕೊನೆಗೆ ತಾವೇ ಆಂಬುಲೆನ್ಸ್ ಚಲಾಯಿಸಿಕೊಂಡು ಹೊನ್ನಾಳಿಯ ಸ್ಮಶಾನಕ್ಕೆ ಶವವನ್ನು ಕೊಂಡೊಯ್ದು ಅಲ್ಲಿ ಕುಟುಂಬಸ್ಥರ ಸಮ್ಮುಖ ಶವಸಂಸ್ಕಾರ ಮಾಡಿಸಿದ್ದಾರೆ.

ಹೊನ್ನಾಳಿಯಲ್ಲಿ ನೆಲೆಸಿದ ಆಂಧ್ರಪ್ರದೇಶ ಮೂಲದ ಕುಟುಂಬವೊಂದಕ್ಕೆ  ಸೇರಿದ 31 ವರ್ಷದ ವ್ಯಕ್ತಿ ಕರೊನಾ ಸೋಂಕಿತನಾಗಿ ಚಿಕಿತ್ಸೆ ಪಡೆಯುತ್ತಿದ್ದು  ಚಿಕಿತ್ಸೆ ಫಲಿಸದೆ  ಮೃತಪಟ್ಟಿದ್ದ. ಆದರೆ ಈತನ ಶವವನ್ನು ಊರಿಗೆ ಕಳುಹಿಸಿಕೊಡದಂತೆ ಆಂಧ್ರಪ್ರದೇಶದ ಗ್ರಾಮವೊಂದರಿಂದ ವಿರೋಧ ವ್ಯಕ್ತವಾಗಿತ್ತು.

ಹೊನ್ನಾಳಿಯ ಹಿಂದೂ ರುದ್ರಭೂಮಿಯಲ್ಲಿ ರೇಣುಕಾಚಾರ್ಯ ಸ್ವತಃ ನೇತೃತ್ವವಹಿಸಿ ಸುಗಮವಾಗಿ ಅಂತ್ಯಸಂಸ್ಕಾರ ನಡೆಯುವಂತೆ ನೋಡಿಕೊಂಡರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English