ಮಹಿಳೆಯ ಮನೆಗೆ ಅಕ್ರಮ ಪ್ರವೇಶಿಸಿ ಕೊಲೆ ಯತ್ನ, ಏಳು ಮಂದಿಯ ಬಂಧನ

9:19 PM, Wednesday, June 2nd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Shaktinagara Attackersಮಂಗಳೂರು : ಮಹಿಳೆಯೊಬ್ಬರ ಮನೆಗೆ ಅಕ್ರಮ ಪ್ರವೇಶಿಸಿ ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಗೊಳಿಸಿ, ಮಹಿಳೆಗೆ  ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿ 9 ಮಂದಿಗಳ ಪೈಕಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೋಡಿಕಲ್ ನಿವಾಸಿ ರಂಜಿತ್ ಯಾನೆ ರಂಜು ಯಾನೆ ತಮ್ಮು (28), ಉರ್ವಸ್ಟೋರ್‌ನ ಸುಂಕದಕಟ್ಟೆ ನಿವಾಸಿ ಅವಿನಾಶ್ ಯಾನೆ ಅವಿ (23), ಪ್ರಜ್ವಲ್ ಯಾನೆ ಪಚ್ಚು(24), ದೀಕ್ಷಿತ್ ಯಾನೆ ದೀಚು(21), ಹೇಮಂತ್ ಯಾನೆ ಹೋಮು(19), ಧನು(19) ಹಾಗೂ ಯತಿರಾಜ್ ಯಾನೆ ಯತಿ(23) ಬಂಧಿತರು.

ಬಂಧಿತರಿಂದ ಮಾರಕಾಸ್ತ್ರ ಹಾಗೂ ದ್ವಿಚಕ್ರ ವಾಹನ ಸ್ವಾಧೀನಪಡಿಸಲಾಗಿದೆ. ರಂಜಿತ್ ವಿರುದ್ಧ ರೌಡಿ ಶೀಟರ್ ತೆರೆಯಲಾಗಿದೆ. ಈತನ ವಿರುದ್ಧ ಉರ್ವ ಠಾಣೆಯಲ್ಲಿ 9, ಕಾವೂರು ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಉರ್ವ ಠಾಣೆಯಲ್ಲಿ ಅವಿನಾಶ್ ಕೂಡ ರೌಡಿಶೀಟರ್ ಆಗಿದ್ದು, ಇಲ್ಲಿ 2 ಕೇಸ್ ಇದೆ. ಪ್ರಜ್ವಲ್ ವಿರುದ್ಧ ಉರ್ವ ಮತ್ತು ಕಾವೂರು ಠಾಣೆಯಲ್ಲಿ ತಲಾ ಒಂದು ಹಲ್ಲೆ ಪ್ರಕರಣ ದಾಖಲಾಗಿದೆ. ಇತರ ವಿರುದ್ಧವೂ ಉರ್ವ ಠಾಣೆಯಲ್ಲಿ ರೌಡಿಶೀಟ್ ಹಾಕಲಾಗಿದೆ. ದೀಕ್ಷಿತ್ ವಿರುದ್ಧ ಬರ್ಕೆಯಲ್ಲಿ ಒಂದು ಹಾಗೂ ಪಣಂಬೂರು ಠಾಣೆಯಲ್ಲಿ 2 ಕೇಸ್ ಇದೆ ಎಂದು ಕಮಿಷನರ್ ತಿಳಿಸಿದು.

ಮೇ 30ರಂದು ಶಕ್ತಿನಗರದ ಪ್ರೀತಿ ನಗರ ಸೈಟಿನಲ್ಲಿ ವೀಣಾರವರು ಮನೆಯಲ್ಲಿದ್ದ ಸಂದರ್ಭ ರಾತ್ರಿ 8ಗಂಟೆ ವೇಳೆಗೆ ಆರೋಪಿಗಳು ತಲವಾರು ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮನೆಗೆ ಅಕ್ರಮವಾಗಿ ಪ್ರವೇಶಿಸಿ ಬೆದರಿಕೆ ಹಾಕಿ, ತಲವಾರು ಬೀಸಿದ್ದಲ್ಲದೆ, ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿ, ಬಳಿಕ ಪರಾರಿಯಾಗಿದ್ದರು.

ಮನೆಯ ಹೊರಗಡೆ ಜನ ಸೇರಿದ್ದನ್ನು ನೋಡಿದ ಆರೋಪಿಗಳು ಆ ಸಂದರ್ಭದಲ್ಲೂ ಬೆದರಿಕೆ ಹಾಕಿದ್ದ ಕುರಿತಂತೆ ಕಂಕನಾಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಹೇಮಂತ್ ಎಂಬಾತ 20 ವರ್ಷದ ಯುವತಿಗೆ ಕಿರುಕುಳ ನೀಡುತ್ತಿದ್ದು ಈ ಬಗ್ಗೆ ಅವನನ್ನು ಪ್ರಶ್ನಿಸಿದಾಗ, ಆತ ತನ್ನ ರೌಡಿ-ಶೀಟರ್ ಸ್ನೇಹಿತರೊಂದಿಗೆ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ.

Vandalism

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English