ದೈವಸ್ಥಾನದ ಮೈದಾನದಲ್ಲಿ ಹಿಂದೂ ಯುವಕರ ಜೊತೆ ಆಡುತ್ತಿದ್ದ ಅನ್ಯ ಧರ್ಮೀಯ ಯುವಕನನ್ನು ಹೊರದಬ್ಬಿದ ಆಡಳಿತ ಮಂಡಳಿ ಸದಸ್ಯ

2:41 PM, Wednesday, July 14th, 2021
Share
1 Star2 Stars3 Stars4 Stars5 Stars
(No Ratings Yet)
Loading...

cricketಸುಳ್ಯ :  ಜಯನಗರದ ಶ್ರೀನಾಗ ಬ್ರಹ್ಮ ಆದಿ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದ ಮೈದಾನದಲ್ಲಿ ಹಿಂದೂ ಯುವಕರ ಜೊತೆ ಆಡುತ್ತಿದ್ದ ಅನ್ಯ ಧರ್ಮೀಯ ಯುವಕನನ್ನ ಆಡಳಿತ ಮಂಡಳಿ ಸದಸ್ಯ ಪ್ರವೀಣ್ ಹೊರದಬ್ಬಿದ್ದಾರೆ.

ಪ್ರವೀಣ್ ಹಿಂದೂ ಯುವಕರೊಂದಿಗೆ ಕ್ರಿಕೆಟ್‌ ಆಟವಾಡುತ್ತಿದ್ದ ಕ್ರೈಸ್ತ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

‌ಇಲ್ಲಿ ಅನ್ಯಧರ್ಮಿಯರಿಗೆ ಆಡಲು ಅವಕಾಶವಿಲ್ಲ ಎಂದು ಯುವಕನನ್ನು ಸ್ಥಳದಿಂದ ಹೊರಹೋಗುವಂತೆ ಒತ್ತಾಯಿಸಿದ್ದು, “ಹಿಂದೂಗಳು ಅನ್ಯಧರ್ಮಿಯರೊಡನೆ ಏಕೆ ಆಡುತ್ತಾರೆ?” ಎಂದು ಪ್ರವೀಣ್‌ ಕೇಳಿದ್ದಾರೆ.

ಈ ಮೈದಾನದಲ್ಲಿ ಯಾವುದೇ ಅನ್ಯಜಾತಿಯವರು ಆಡಬಾರದು ಎಂದು ತಾಕೀತು ಮಾಡಿ, ಕ್ರೈಸ್ತ ಯುವಕನನ್ನು ಮೈದಾನದಿಂದ ಹೊರಗೆ ಕಳುಹಿಸಿದ್ದಾರೆ. ಆಟದಲ್ಲಿ ಧರ್ಮವಿಲ್ಲ ಎಂದು ಮನವರಿಕೆ ಮಾಡಲು ಯುವಕರ ಯತ್ನಿಸಿದರೂ ಪ್ರವೀಣ್ ಅವರ ಮಾತನ್ನು ಕೇಳಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ಮುಖಂಡ ಪ್ರವೀಣ್ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English