ಪ್ರಕೃತಿ ವಿಕೋಪದಿಂದ ನಷ್ಟ; ಶಾಸಕ ಡಾ.ಭರತ್ ಶೆಟ್ಟಿ ಪರಿಶೀಲನೆ; ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡಲು ಮನವಿ

1:47 PM, Monday, July 26th, 2021
Share
1 Star2 Stars3 Stars4 Stars5 Stars
(No Ratings Yet)
Loading...

Bharath-Shettyಮಂಗಳೂರು : ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕುಂಜತ್ತಬೈಲ್ ವಾರ್ಡಿನ ಅತ್ರೆಬೈಲ್ ಏರಿಯಾದಲ್ಲಿ ಭಾರೀ ಮಳೆಯ ಕಾರಣ ಫಲ್ಗುಣಿ ನದಿ ತೀರ ಪ್ರದೇಶದಲ್ಲಿ ಮಣ್ಣು ಕುಸಿದಿದ್ದು, ಕೃಷಿಭೂಮಿ ಹಾಗೂ ಮನೆಗಳಿಗೆ ಹಾನಿ ಸಂಭವಿಸಿತ್ತು. ಪ್ರಕೃತಿ ವಿಕೋಪದಿಂದ ನಷ್ಟಕ್ಕೊಳಗಾದ ಪ್ರದೇಶಗಳಿಗೆ ಶಾಸಕ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿದರು.

ಅತ್ರೆಬೈಲಿಗೆ ಹೋಗುವ ನಾಗರಿಕರಿಗೆ ಸೂಕ್ತವಾದ ರಸ್ತೆ ಇಲ್ಲ. ಇಲ್ಲಿ ಉತ್ತಮ ರಸ್ತೆಯನ್ನು ಮಾಡಲು ತಾವು ತಯಾರಿದ್ದು, ಜನರು ರಸ್ತೆಗೆ ಜಾಗ ಬಿಟ್ಟುಕೊಟ್ಟರೆ ರಸ್ತೆ ನಿರ್ಮಾಣಕ್ಕೆ ಆದಷ್ಟು ಬೇಗ ಕಾರ್ಯಯೋಜನೆ ಹಾಕಿಕೊಳ್ಳಲಾಗುವುದು ಎಂದು ಸ್ಥಳೀಯರಲ್ಲಿ ಮನವಿ ಮಾಡಿದರು.

ಶಾಸಕರೊಂದಿಗೆ ಪ್ರಮುಖರಾದ ಕಾರ್ಪೊರೇಟರ್ ಶರತ್ ಕುಮಾರ್ ಕುಂಜತ್ತಬೈಲ್, ಗಣೇಶ್ ಕುಲಾಲ್, ಹೊನ್ನಯ್ಯ ಟೈಲರ್, ಮಾಧವ, ಹರೀಶ್ ಅತ್ರೆಬೈಲ್, ಗಣೇಶ್ ಗಾಣಿಗ ಹಾಗೂ ಸ್ಥಳೀಯರು ಇದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English