ಶ್ರೀ ಕ್ಷೇತ್ರ ತೌಡುಗೋಳಿ ʼಕಣ್ಣ್‌ ನಿಲಿಕೆ ತುವೋಡು ಅಪ್ಪೆ ದುರ್ಗಾ ದೇವಿನ್‌ʼ ಹಾಡು ರಿಲೀಸ್‌

3:46 PM, Thursday, October 14th, 2021
Share
1 Star2 Stars3 Stars4 Stars5 Stars
(4 rating, 1 votes)
Loading...

Thoudugoli-Songಮಂಗಳೂರು : ವಿಜಯ ದಶಮಿಯ ಈ ಶುಭ ಸಂದರ್ಭದಲ್ಲಿ ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರದ ಕುರಿತಾದ ಭಕ್ತಿ ಪ್ರಧಾನ ಹಾಡು ಬಿಡುಗಡೆ ಮಾಡುವ ಅವಕಾಶ ಒದಗಿ ಬಂದಿರುವುದು ನನಗೆ ತಾಯಿ ದುರ್ಗಾದೇವಿ ಒದಗಿಸಿದ ಪುಣ್ಯ ಎಂದು ಕರ್ನಾಟಕ ಸರಕಾರದ ಅರೆ ಅಲೆಮಾರಿ ಹಾಗೂ ಅಲೆಮಾರಿ ನಿಗಮದ ಅಧ್ಯಕ್ಷರಾದ ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.

ಅವರು ಶಿವಪ್ರಸಾದ್ ತೌಡುಗೋಳಿ ಸಾಹಿತ್ಯದಲ್ಲಿ ಮೆಗಾ ಮೀಡಿಯಾ ಎಂಟರ್‌ ಟೈನ್‌ಮೆಂಟ್ಸ್‌ ನಿಮಿಸಿದ ಸಂತೋಷ್‌ ಪುಚ್ಚೇರ್‌ ಹಾಡಿದ ʼಕಣ್ಣ್‌ ನಿಲಿಕೆ ತುವೋಡು ಅಪ್ಪೆ ದುರ್ಗಾ ದೇವಿನ್‌ʼ ತುಳು ಭಾಷೆಯ ಹಾಡು ಬಿಡುಗಡೆ ಮಾಡಿ ಮಾತನಾಡುತ್ತಾ ಸಾಹಿತ್ಯ ಎನ್ನುವುದು ಎಂತಹ ಕಠಿಣ ಮನಸ್ಸನ್ನು ಮೃದುಗೊಳಿಸುತ್ತದೆ. ಒತ್ತಡದ ನಡುವೆಯೂ ಹಾಡಿಗೆ ತಲೆಭಾಗದವರಿಲ್ಲ ಶಿವಪ್ರಸಾದ್ ತೌಡುಗೋಳಿ ಸಾಹಿತ್ಯದಲ್ಲಿ ಮೂಡಿ ಬಂದ ಈ ಹಾಡು ಅದ್ಭುತವಾಗಿದೆ. ಈ ಹಾಡಿನ ಮೂಲಕ ತೌಡುಗೋಳಿ ಕ್ಷೇತ್ರ ಇನ್ನಷ್ಟು ಪ್ರಸಿದ್ದಿ ಹೊಂದಲಿ ಎಂದು ಹಾರೈಸಿದರು.

ಕೃಷಿಕ ಸೋಮನಾಥ ಕಾರಂತ್‌, ವರ್ಕಾಡಿ ಪಂಚಾಯತ್‌ ಮಾಜಿ ಸದಸ್ಯ ಆನಂದ ತಚ್ಚಿರೆ, ಕಿಶೋರ್‌ ನಾಯಕ್‌ ವರ್ಕಾಡಿ ಈ ಸಂದರ್ಭ ಮಾತನಾಡಿ ಶುಭ ಹಾರೈಸಿದರು. ಗೋವಿಂದ ಗುರು ಸ್ವಾಮಿ ಉಪಸ್ಥಿತರಿದ್ದರು.

ಹಾಡನ್ನು ಮೂದಬಿದ್ರೆಯ ಪುಚ್ಚೆರ್‌ ಟ್ಯಾಬ್‌ ಸ್ಟಡಿಯೋದಲ್ಲಿ ರೇಕಾಡಿಂಗ್‌ ಮಾಡಲಾಗಿದ್ದು, ಸಂತೋಷ್‌ ಪುಚ್ಚೆರ್‌ ಹಾದಿದ್ದಾರೆ. ಮೆಗಾ ಮೀಡಿಯಾ ಎಂಟರ್‌ ಟೈನ್‌ಮೆಂಟ್ಸ್‌ ನಿರ್ಮಿಸಿದ ಈ ಹಾಡಿನ ಸಂಕಲನ ಮೆಗಾ ಮೀಡಿಯಾ ಸಂಸ್ಥೆ ಮಾಡಿದೆ. ಈ ಹಾಡು ಮೆಗಾ ಮೀಡಿಯಾ ನ್ಯೂಸ್‌ ನ ಯೂಟ್ಯೂಬ್‌ ಚಾನಲ್‌ ನಲ್ಲಿ ಅಕ್ಟೋಬರ್‌ 14 ರಂದು ಸಂಜೆ 7.45 ಕ್ಕೆ ಪ್ರಸಾರ ಆಗಲಿದೆ.

ʼಕಣ್ಣ್‌ ನಿಲಿಕೆ ತುವೋಡು ಅಪ್ಪೆ ದುರ್ಗಾ ದೇವಿನ್‌ʼ ಹಾಡು ಕೇಳಲು ಈ ಲಿಂಕ್ ಬಳಸಿಮೆಗಾ ಮೀಡಿಯಾ ಯೂಟ್ಯೂಬ್‌

Thoudugoli-Song

Thoudugoli-Song

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English