ಕನ್ನಡ, ತುಳು ಸಿನೆಮಾ ನಟ, ನಿರ್ದೇಶಕ ಶರತ್ ಚಂದ್ರ ಕದ್ರಿ ಇನ್ನಿಲ್ಲ

6:15 PM, Monday, January 10th, 2022
Share
1 Star2 Stars3 Stars4 Stars5 Stars
(No Ratings Yet)
Loading...

sharathchandra Kadriಮಂಗಳೂರು : ಕನ್ನಡ, ತುಳು ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ ಹಾಗೂ ನೂರಕ್ಕೂ ಹೆಚ್ಚು ನಾಟಕ ಗಳನ್ನು ರಚಿಸಿ ಅಭಿನಯಿಸಿದ ಹಿರಿಯ ನಟ ಹಾಗೂ ನಿರ್ದೇಶಕ ಶರತ್ ಚಂದ್ರ ಕದ್ರಿ ಅವರು ಭಾನುವಾರ ಬೆಳಿಗ್ಗೆ 4.30  ಕ್ಕೆ ತಮ್ಮ ಸ್ವ ಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೆ.ಏನ್ ಟೈಲರ್ ನಾಟಕಗಳ ಮೂಲಕ ನಾಯಕ ನಟನಾಗಿ ರಂಗಭೂಮಿ ಪ್ರವೇಶಿಸಿದ ಶರತ್ ಚಂದ್ರ ಕದ್ರಿ ಕನ್ನಡದ ಕತ್ತೆಗಳು ಸಾರ್ ಕತ್ತೆಗಳು ಸಿನೆಮಾದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ತುಳುವಿನ ಕಟಪಾಡಿ ಕಟ್ಟಪ್ಪಾ, ದೊಂಬರಾಟ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಬಳಿಕ ಇವರು ತುಳು ಚಲನಚಿತ್ರ ಬೊಳ್ಳಿಲು  ಇದರ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಮಗ ಶ್ರವಣ್ ರನ್ನು ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಪ್ರಸಕ್ತ ರಾಜೇಶ್ ಬ್ರಹ್ಮಾವರ ಅವರ ಹೊಸ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದು. ತನ್ನ ಸ್ವತಃ ನಿರ್ಮಾಣದ ಕನ್ನಡ ಚಲನ ಚಿತ್ರ ದ್ರುವ ನಕ್ಷತ್ರದ ಟೀಸರ್ ಬಿಡುಗಡೆ ಗೊಂಡಿದ್ದು ಇನ್ನೇನು ಸಟ್ಟೇರಬೇಕು ಎನ್ನುವಷ್ಟರಲ್ಲಿ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಅಕ್ಟೋಬರ್ರ 4.1956 ಲ್ಲಿ ಜನಿಸಿದ ಶರತ್ ಚಂದ್ರ ಕದ್ರಿ ಇತ್ತೀಚೆಗೆ ಅನಾರೋಗ್ಯ ಕ್ಕೆ  ತುತ್ತಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.

ಮಕ್ಕಳಾದ ಶ್ರವಣ್ ಕುಮಾರ್, ಶರಣ್ ಹಾಗೂ ಪತ್ನಿ ಶಕೀಲಾ ಅವರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಶಕ್ತಿನಗರದ ರುದ್ರಭೂಮಿಯಲ್ಲಿ ಜರುಗಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English