ಉಳ್ಳಾಲ : ವೈಯಕ್ತಿಕ ದ್ವೇಷ ಯುವಕನ ಕೊಲೆಯತ್ನ

12:54 PM, Thursday, January 10th, 2013
Share
1 Star2 Stars3 Stars4 Stars5 Stars
(No Ratings Yet)
Loading...

Ullal group clash ಉಳ್ಳಾಲ : ಉಳ್ಳಾಲ ಕೋಡಿ ನಿವಾಸಿ ಇಬ್ರಾಹಿಂ ಎಂಬವರ ಮಗ ವಾಕರ್ ಯೂನುಸ್ (೨೧) ಎಂಬಾತನ ಮೇಲೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿ, ಕಡಿದು ಕೊಲೆ ಮಾಡಲು ಯತ್ನಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ವಾಕರ್ ಯೂನುಸ್ ನಿನ್ನೆ ರಾತ್ರಿ ದರ್ಗಾ ಸಂದರ್ಶನ ಮುಗಿಸಿ ಕೋಡಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಕೊಲೆಯತ್ನ ನಡೆಸಲಾಗಿದೆ. ವಕಾರ್ ಯೂನಸ್ ತನ್ನ ಸ್ನೇಹಿತರೊಂದಿಗೆ ಕಾರಿನಿಂದ ಇಳಿದು ಪಕ್ಕದಲ್ಲಿದ್ದ ಗೂಡಂಗಡಿ ಬಳಿ ತೆರಳುತ್ತಿದ್ದಾಗ ಹಠಾತನೆ ದಾಳಿ ನಡೆಸಿದ ಇಲಿಯಾಸ್ ಮತ್ತು ಆತನ ತಂಡದ ಸದಸ್ಯರು ಈತನ ಮೇಲೆ ತಲವಾರಿನಿಂದ ದೇಹದ ವಿವಿಧ ಭಾಗಗಳಿಗೆ ಹಲ್ಲೆ ನಡೆಸಿ ಪರಾರಿಯಾಗಿದೆ. ವಕಾರ್ ಯೂನಸ್ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇತ್ತೆಚಿನ ದಿನಗಳಲ್ಲಿ ಉಳ್ಳಾಲದ ಕೋಡಿ ಪರಿಸರದಲ್ಲಿ ಹಲವು ದಿನಗಳಿಂದ ರೌಡಿಸಂ ಚಟುವಟಿಕೆಗಳು ಪ್ರಾರಂಭಗೊಂಡಿದ್ದು ಕುಖ್ಯಾತ ಕ್ರಿಮಿನಲ್ ಇಲಿಯಾಸ್ ಮತ್ತು ತಂಡದವರು ಸದಾ ಒಂದಿಲೊಂದು ಅನಗತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಸ್ಥಳೀಯ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಕುಖ್ಯಾತ ಕ್ರಿಮಿನಲ್ ಇಲ್ಯಾಸ್‌ನನ್ನು ಉಳ್ಳಾಲದಿಂದ ಗಡೀಪಾರು ನಡೆಸುವಂತೆ ಉಳ್ಳಾಲದ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಕಮೀಷನರ್ ಅವರಿಗೆ ಮನವಿ ಸಲ್ಲಿಸಿದ್ದಾರೆ ಆದರೆ ಇಲ್ಯಾಸ್ ಕಮೀಷನರ್‌ಗೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿದ್ದಾನೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English