ಸೀಬೆಕಾಯಿ ತಿನ್ನುವ ಆಸೆಯಿಂದ ಮರ ಹತ್ತಿದ ಬಾಲಕ ಕೆಳಗೆ ಬಿದ್ದು ಸಾವು

4:14 PM, Saturday, March 19th, 2022
Share
1 Star2 Stars3 Stars4 Stars5 Stars
(No Ratings Yet)
Loading...

Ullasಕಡಬ : ಸೀಬೆಕಾಯಿ ತಿನ್ನುವ ಆಸೆಯಿಂದ ಮರ ಹತ್ತಿದ 8 ವರ್ಷದ ಬಾಲಕ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಕಾಣಿಯೂರು ಸಮೀಪದ ದೋಳ್ಪಾಡಿ ಬಳಿ ಸಂಭವಿಸಿದೆ.

ದೋಳ್ಪಾಡಿ ಮರಕ್ಕಡ ನಿವಾಸಿ ದಿವಾಕರ ಗೌಡ ಎಂಬುವರ ಪುತ್ರ ಉಲ್ಲಾಸ್ ಡಿ.ಎಂ. ಮೃತ ದುರ್ದೈವಿ. ಈತ ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದ.

ಗುರುವಾರ ಶಾಲೆಯಿಂದ ಬಂದ ಬಳಿಕ ಮನೆ ಸಮೀಪ ಸೀಬೆಹಣ್ಣು ಕೊಯ್ಯಲು ಮರ ಹತ್ತಿದ ಉಲ್ಲಾಸ್, ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಉಂಟಾಗಿತ್ತು. ತಕ್ಷಣ ಕಡಬ ಸರ್ಕಾರಿ ಸಮುದಾಯ ಅಸ್ಪತ್ರೆಗೆ ಕರೆದೊಯ್ದರೂ ಬದುಕಲಿಲ್ಲ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English