ಸೀಬೆಕಾಯಿ ತಿನ್ನುವ ಆಸೆಯಿಂದ ಮರ ಹತ್ತಿದ ಬಾಲಕ ಕೆಳಗೆ ಬಿದ್ದು ಸಾವು

Saturday, March 19th, 2022
Ullas

ಕಡಬ : ಸೀಬೆಕಾಯಿ ತಿನ್ನುವ ಆಸೆಯಿಂದ ಮರ ಹತ್ತಿದ 8 ವರ್ಷದ ಬಾಲಕ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಕಾಣಿಯೂರು ಸಮೀಪದ ದೋಳ್ಪಾಡಿ ಬಳಿ ಸಂಭವಿಸಿದೆ. ದೋಳ್ಪಾಡಿ ಮರಕ್ಕಡ ನಿವಾಸಿ ದಿವಾಕರ ಗೌಡ ಎಂಬುವರ ಪುತ್ರ ಉಲ್ಲಾಸ್ ಡಿ.ಎಂ. ಮೃತ ದುರ್ದೈವಿ. ಈತ ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದ. ಗುರುವಾರ ಶಾಲೆಯಿಂದ ಬಂದ ಬಳಿಕ ಮನೆ ಸಮೀಪ ಸೀಬೆಹಣ್ಣು ಕೊಯ್ಯಲು ಮರ ಹತ್ತಿದ ಉಲ್ಲಾಸ್, ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ತಲೆಗೆ […]

ಸುಬ್ರಹ್ಮಣ್ಯಕ್ಕೆ ಬಂದು ಹಣವಿಲ್ಲದೆ ಕಂಗಾಲಾದ ಪ್ರೇಮಿಗಳು… ಬಳಿಕ ಆಗಿದ್ದೇನು!?

Friday, February 9th, 2018
subramanya

ಮಂಗಳೂರು: ಊರಿಗೆ ಮರಳಲು ದುಡ್ಡಿಲ್ಲದೆ ಕಂಗಾಲಾಗಿದ್ದ ಹಾಸನದ ಯುವ ಪ್ರೇಮಿಗಳನ್ನು ಕಡಬ ಠಾಣೆ ಪೊಲೀಸರು ಊರಿಗೆ ಕಳುಹಿಸಿದ ಘಟನೆ ನಡೆದಿದೆ. ಯುವ ಪ್ರೇಮಿಗಳು ಮನೆ ಮಂದಿಗೆ ತಿಳಿಸದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರೈಲಿನಲ್ಲಿ ಬಂದಿದ್ದರು. ಆದರೆ ತಂದ ಹಣವೆಲ್ಲ ಖರ್ಚಾಗಿ ಕೊನೆಗೆ ಊಟ ಮಾಡಲು, ಊರಿಗೆ ಮರಳಲು ಸಾಧ್ಯವಾಗದೆ ನೆಟ್ಟಣ ರೈಲು ನಿಲ್ದಾಣದಲ್ಲಿ ಕುಳಿತಿದ್ದರು. ಹಾಸನದ ನಿವಾಸಿಯಾಗಿರುವ ಯುವಕ ನೂತನ್ ಹಾಸ್ಟೆಲ್‌‌ನಲ್ಲಿದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದ. ತನ್ನ ಪ್ರೇಯಸಿಯನ್ನು ಕುಕ್ಕೆ ಕ್ಷೇತ್ರಕ್ಕೆ ಕರೆದುಕೊಂಡು ಬಂದಿದ್ದ. ಆದರೆ ಬಳಿಕ ದುಡ್ಡಿಲ್ಲದೆ […]

ಗೌರಿ ಹತ್ಯೆ: ವಿಶೇಷ ತನಿಖಾ ತಂಡ 3 ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ

Saturday, October 7th, 2017
gauri

ಮಂಗಳೂರು: ಗೌರಿ ಲಂಕೇಶ್‌ ಕೊಲೆ ಪ್ರಕರಣ ಕುರಿ ತಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಎಸ್‌ಐಟಿ ಸನಾತನ ಸಂಸ್ಥೆಯ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಜಾಡು ಹಿಡಿದು ಪೊಲೀಸರು ಮೂರು ಬಾರಿ ದಕ್ಷಿಣ ಕನ್ನಡ ಜಿಲ್ಲೆಗೂ ಬಂದು ಹೋಗಿದ್ದಾರೆ. ಹೀಗಾಗಿ ಇಡೀ ರಾಜ್ಯವನ್ನು ಬೆಚ್ಚಿ ಬೀಳಿ ಸಿದ್ದ ಗೌರಿ ಲಂಕೇಶ್‌ ಹತ್ಯೆ ಪ್ರಕ ರಣದ ಹಿಂದೆ ದಕ್ಷಿಣ ಕನ್ನಡದ ನಂಟು ಇದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡದ ಪೊಲೀಸರು ಜಿಲ್ಲೆಯ ಪುತ್ತೂರು ತಾಲೂಕು ಕಡಬ […]

ಮೂರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

Thursday, September 14th, 2017
Putturu Family

ಪುತ್ತೂರು :  ಗಂಡನ ಜತೆಗೆ ವೈಮನಸ್ಸು ಹೊಂದಿದ ಹೆಂಡತಿ ತನ್ನ ಮೂರು ಕಂದಮ್ಮಗಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ಪುತ್ತೂರು ತಾಲೂಕಿನ ಕುಂತೂರು ಎಂಬಲ್ಲಿ ನಡೆದಿದೆ. ಕಮಲಾದೇವಿ ಯಾನೆ ಜಮುನಾ(41), ಅವರ ಮಕ್ಕಳಾದ ಸುಮನಾ (13), ಸುಷ್ಮಾ (11) ಹಾಗೂ ಸಮೀಕ್ಷಾ (6) ವಿಷ ಸೇವಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಮೂಲತ ಸುಳ್ಯದ ಐವರ್ನಾಡು ನಿವಾಸಿಯಾದ ಹಾಗೂ ಪ್ರಸ್ತುತ ಕುಂತೂರಿನಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿರುವ ಕಮಲಾದೇವಿ (41) ತನ್ನ ಗಂಡನ ಜತೆಗೆ […]

ಸಿ.ಎ.ಬ್ಯಾಂಕ್ ಉಪಾಧ್ಯಕ್ಷರ ಮೇಲೆ ಹಲ್ಲೆ , ಐವರ ಬಂಧನ

Monday, July 17th, 2017
Ramesh Bhat

ಕಡಬ: ಅಂಗಡಿಗೆ ಹೋದ ಸಂದರ್ಭದಲ್ಲಿ ದುಷ್ಕೃರ್ಮಿಗಳ ತಂಡವೊಂದು ಕಡಬದ ಸಿ.ಎ.ಬ್ಯಾಂಕ್ ಉಪಾಧ್ಯಕ್ಷರ ಮೇಲೆ ಕಬ್ಬಿಣದ ರಾಡ್‌ನಿಂದ ಗಂಭೀರವಾಗಿ ಹಲ್ಲೆ ನಡೆಸಿ ಪರಾರಿಯಾದ  ಐವರು ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದಾರೆ . ಪರಿಣಾಮ ಕಡಬದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ‌. ಕಡಬ ಠಾಣೆಗೆ ಸಾರ್ವಜನಿಕರು ಜಮಾವಣೆಗೊಂಡಿದ್ದಾರೆ. ರಮೇಶ್ ಭಟ್ ಕಲ್ಪುರೆ ಹಲ್ಲೆಗೊಳಗಾದ ಬ್ಯಾಂಕ್ ಉಪಾಧ್ಯಕ್ಷ. ಕೃಷಿಕರಾಗಿದ್ದುಕೊಂಡು ಸಾಮಾಜಿಕ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದ ರಮೇಶ್ ಭಟ್, ನಗರದ ಯಶೋಧಾ ಸೂಪರ್ ಮಾರ್ಕೆಟ್‌ಗೆ ತೆರಳಿ ಸಾಮಾಗ್ರಿಗಳನ್ನು ಖರೀದಿಸಿ ತಮ್ಮ ಜೀಪಿನ ಹತ್ತಿರ ಆಗಮಿಸುತ್ತಿದ್ದಾಗ ಏಕಾಏಕಿ ಮುಗಿಬಿದ್ದ ಆಕ್ರಮಣಕಾರರು […]