ಭಾಮಿನಿ ಮಾಸ ಪತ್ರಿಕೆ ಬಿಡುಗಡೆ

9:04 PM, Wednesday, October 6th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಭಾಮಿನಿ ಮಾಸ ಪತ್ರಿಕೆ ಬಿಡುಗಡೆಮಂಗಳೂರು : ಭಾಮಿನಿ ಮಾಸ ಪತ್ರಿಕೆಯ ಬಿಡುಗಡೆ ಸಮಾರಂಭ ಇಂದು ಸಂಜೆ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಎಸ್. ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.

ಭಾಮಿನಿ ಮಾಸ ಪತ್ರಿಕೆ ಬಿಡುಗಡೆ
ಭಾಮಿನಿ ಪತ್ರಿಕೆಯ ಬಿಡುಗಡೆಯನ್ನು ಆಳ್ವಾಸ ಎಜುಕೇಶನ್ ಫೌಂಡೇಶನ್ ಇದರ ಅಧ್ಯಕ್ಷ ಎಂ. ಮೋಹನ ಆಳ್ವಾ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಭಾಮಿನಿ ಮಾಸ ಪತ್ರಿಕೆ ಸುಸಂಸ್ಕೃತವಾಗಿ ಹೊರಬರಲಿ, ಓದುಗರ ಮನದಲ್ಲಿ ಭಾವೈಕ್ಯತೆ ಮೂಡಿಸಲಿ ಎಂದು ಹಾರೈಸಿದರು.

ಭಾಮಿನಿ ಮಾಸ ಪತ್ರಿಕೆ ಬಿಡುಗಡೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಕೃಷ್ಣ ಪುನರೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂಎಸ್ಇಝಡ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎ ಜೆ. ಪೈ ಉಪಸ್ಥಿತರಿದ್ದರು. ಮಂಜೇಶ್ವರ ವಿಧಾನ ಸಭಾ ಶಾಸಕ ಸಿ. ಎಚ್. ಕುಂಞಂಬು ಮತ್ತು ಯಕ್ಷಗಾನ ಕಲಾವಿದರಾದ ಬಲಿಪ ನಾರಾಯಣ ಭಾಗವತರು ಉಪಸ್ಥಿತರಿದ್ದರು.
ಸಂಪಾದಕ ಮುರಳಿ ಶೇಣಿ ಸ್ವಾಗತಿಸಿದರು.

ಭಾಮಿನಿ ಮಾಸ ಪತ್ರಿಕೆ ಬಿಡುಗಡೆ

ಭಾಮಿನಿ ಮಾಸ ಪತ್ರಿಕೆ ಬಿಡುಗಡೆ

ಭಾಮಿನಿ ಮಾಸ ಪತ್ರಿಕೆ ಬಿಡುಗಡೆ

ಭಾಮಿನಿ ಮಾಸ ಪತ್ರಿಕೆ ಬಿಡುಗಡೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English