ಕಾಡಿನಿಂದ ನಾಡಿಗೆ ಬಂದು ದನ, ಕರುಗಳನ್ನು ತಿನ್ನುತ್ತಿದ್ದ ಚಿರತೆ ಅರಣ್ಯ ಇಲಾಖೆಯ ಬೋನಿಗೆ

4:48 PM, Thursday, July 11th, 2013
Share
1 Star2 Stars3 Stars4 Stars5 Stars
(4 rating, 4 votes)
Loading...

leopardಬಂಟ್ವಾಳ: ಚೆನ್ನೈತ್ತೋಡಿ ಗ್ರಾಮದ ಅಂಗಡಿ ಪಲ್ಕೆ ಕುಲಾಲು ಎಂಬಲ್ಲಿ ಕಾಡಿನಿಂದ ನಾಡಿಗೆ ಬಂದು ದನ, ಕರುಗಳನ್ನು ತಿನ್ನುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆಯ ಬೋನಿನಲ್ಲಿ ಸಿಕ್ಕಿ ಬಿದ್ದ ಘಟನೆ ಗುರುವಾರ ಮುಂಜಾನೆ ನಡೆದಿದೆ.

ಮಾಧವ ಎಂಬವರ ಜಮೀನಿಗೆ ದಾಳಿ ಮಾಡುತ್ತಿದ್ದ ಈ ಚಿರತೆ ದನ, ಕರುಗಳನ್ನು ತಿಂದಿತ್ತು. ಇದರಿಂದ ಬೇಸತ್ತ ಮಾಧವ ಅವರು  ಅರಣ್ಯ ಇಲಾಖೆಯ ನೆರವಿನಲ್ಲಿ ಚಿರತೆಗೆ ಬೋನು ಇರಿಸಿದ್ದು, ನಿರೀಕ್ಷೆಯಂತೆ ನಾಯಿಯನ್ನು ತಿನ್ನಲು ಬಂದ ಚಿರತೆ ಬೋನಿನಲ್ಲಿ ಸಿಕ್ಕಿ ಬಿದ್ದಿದೆ. ಚಿರತೆ ಬೋನಿಗೆ ಸಿಕ್ಕಿಬಿದ್ದ ಸುದ್ದಿ ತಿಳಿದು ಚಿರತೆ ವೀಕ್ಷಣೆಗೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿದ್ದರು.

ಚಿರತೆಯನ್ನು ಅರಣ್ಯ ಇಲಾಖೆಯವರು ವಶಕ್ಕೆ ತೆಗೆದುಕೊಂಡು ಪಿಲಿಕುಳಕ್ಕೆ ಸಾಗಿಸಿದ್ದಾರೆ.

leopard

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English