ಆರ್.ಎಸ್.ಎಸ್ ಗುರು ಸುದರ್ಶನ್ ಹೇಳಿಕೆಯನ್ನು ಖಂಡಿಸಿ ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

6:02 PM, Tuesday, November 16th, 2010
Share
1 Star2 Stars3 Stars4 Stars5 Stars
(No Ratings Yet)
Loading...

ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಮಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಜಿ ಗುರು ಸುದರ್ಶನ್ ಸೋನಿಯಾಗಾಂಧಿಯವರ ಮೇಲೆ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಬಳಿ ಇಂದು ಬೆಳಿಗ್ಗೆ ಪ್ರತಿಭಟನೆ ನಡೆಯಿತು.

ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಪ್ರತಿಭಟನಾಕಾರರನ್ನುದ್ದೇಶಿಸಿ ಮಾತಾನಾಡಿದ ಕಾಂಗ್ರೆಸ್ ಮುಖಂಡ ಹರಿಕೃಷ್ಣ ಬಂಟ್ವಾಳ ಬಿಜೆಪಿ ಮತ್ತು ಆರ್.ಎಸ್.ಎಸ್ ಗಳು ಒಂದೇ ನಾಣ್ಯದ  ಎರಡು ಮುಖಗಳು ಬಿಜೆಪಿ ಮುಖಂಡರು ಬಹಿರಂಗವಾಗಿ ನಾವು ಆರ್.ಎಸ್.ಎಸ್ ಕಾರ್ಯಕರ್ತರು ಎಂದು ಹೇಳುತ್ತಿದ್ದಾರೆ. ಆರ್.ಎಸ್.ಎಸ್ ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಆರ್.ಎಸ್.ಎಸ್ ಹಿಂದೂ ಸಂಘಟನೆಯಲ್ಲ ಅದು ಬಿಜೆಪಿ ಪರ ರಾಜಕೀಯ ಪ್ರಚಾರದ ಮಾಡವ ಸಂಘಟನೆ ಆದುದರಿಂದ ಆರ್.ಎಸ್.ಎಸ್. ಮುಖಂಡ ಸುದರ್ಶನ್ ಕೂಡಲೇ ಸಂಘಟನೆಯಿಂದ ಹೊರ ನಡೆದು ಹಿಂದುಗಳ ಮಾನ ಉಳಿಸಲಿ ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದರು.

ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಪ್ರತಿಭಟನೆಯ ನಾಯಕತ್ವವನ್ನುವಹಿಸಿದ್ದ ದ.ಕ ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷ ಬಿ. ರಮಾನಾಥ ರೈ ತನ್ನ ಬಳಿಗೆ ಬಂದ ಅಧಿಕಾರವನ್ನು ತಿರಸ್ಕರಿಸಿದ ತ್ಯಾಗಮಯಿ ಮಹಿಳೆ ಸೋನಿಯಾ ಗಾಂಧಿ ವಿರುದ್ಧ ಆರ್.ಎಸ್.ಎಸ್. ಗುರು ಮಾಡಿರುವ ಅಪಾದನೆ ಲಜ್ಜೆಗೆಟ್ಟ ಮಾತಾಗಿದೆ. ಆರ್.ಎಸ್.ಎಸ್. ರಾಷ್ಟ್ರದ್ರೋಹ ಕೆಲಸಮಾಡುತ್ತಿದೆ. ನಾನು ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ನ ಹೆಸರು ಹೇಳಿ ಬದುಕಿದ್ದೇನೆ ಸಾಯುವವರೆಗೂ ಇರುತ್ತೇನೆ. ಆರ್.ಎಸ್.ಎಸ್ ಮುಖಂಡರು ನೀಡುತ್ತಿರುವ ನೀಚ ಹೇಳಿಕೆಗಳನ್ನು ಕೂಡಲೇ ನಿಲ್ಲಿಸಿ ಕ್ಷಮೆ ಕೇಳಿ ಎಂದು ರೈ ಹೇಳಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಐವನ್ ಡಿ ಸೋಜಾ, ಶಾಸಕ ಯು.ಟಿ ಖಾದರ್, ಶಶಿಧರ್ ಹೆಗ್ಗಡೆ, ಮಮತಾ ಗಟ್ಟಿ, ಪದ್ಮನಾಭ ಎನ್, ಮೊಯಿದಿನ್ ಬಾವ, ನವೀನ್ ಡಿ ಸೋಜಾ ಸುರೇಶ್ ಬಳ್ಳಾಲ್ ಮೊದಲಾದವರು ಪಾಲ್ಗೊಂಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English