ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಅಧ್ಯರಾಗಿ ಹರಿಕೃಷ್ಣ ಬಂಟ್ವಾಳ

Friday, June 12th, 2020
Harikrishna Bantwal

ಬಂಟ್ವಾಳ: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ( ಕಿಯೋನಿಕ್ಸ್) ಇದರ ಅಧ್ಯರಾಗಿ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ನೀಡಿದೆ. ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನ ಕಾರ್ಯದರ್ಶಿ ಸಿದ್ರಾಮಪ್ಪ ತಳವಾರ ಅವರು ಸರ್ಕಾರದ ಪರವಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಜೂನ್ 12ರಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಕೆ.ಹರಿಕೃಷ್ಣ ಬಂಟ್ವಾಳ್ ಅವರು ಕಳೆದ ಚುನಾವಣೆ ವೇಳೆ […]

ರಮಾನಾಥ ರೈಯವರು ಕಾಂಗ್ರೆಸ್​​ನಲ್ಲಿ‌ ಈಗ ಸಕ್ಕರೆ ಇಲ್ಲದ ಚಹಾದಂತಾಗಿದ್ದಾರೆ: ಹರಿಕೃಷ್ಣ ಬಂಟ್ವಾಳ

Friday, November 16th, 2018
harikrishna

ಮಂಗಳೂರು: ರಮಾನಾಥ ರೈಯವರು ಕಾಂಗ್ರೆಸ್ನಲ್ಲಿ‌ ಈಗ ಸಕ್ಕರೆ ಇಲ್ಲದ ಚಹಾದಂತಾಗಿದ್ದಾರೆ. ಅಧಿಕಾರ ಇಲ್ಲದೆ ಚಡಪಡಿಸುವ ಸ್ಥಿತಿಯಲ್ಲಿದ್ದಾರೆ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ನಡೆದ ಸಭೆಯಲ್ಲಿ ವ್ಯಂಗ್ಯವಾಡಿದರು. ರಮಾನಾಥ ರೈ ಅವರು ಇತ್ತೀಚೆಗೆ ನಡೆದ ಪ್ರತಿಭಟನೆಯೊಂದರಲ್ಲಿ ಸಂಸದ ನಳಿನ್‌ಕುಮಾರ್ ಕಟೀಲು ಸತ್ತ ಹಾಗೆ. ಇನ್ನು ಅವರ ಶವ ಸಂಸ್ಕಾರ ಬಾಕಿ ಇದೆ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ. ಒಬ್ಬ ಜನಪ್ರತಿನಿಧಿಯ ಶವ ಸಂಸ್ಕಾರವನ್ನು‌ ನೋಡಬೇಕೆಂಬ ಹಸಿವು ಇರುವ ರಮಾನಾಥ ರೈ ಅವರು ಜಿಹಾದಿ […]

ಜನಾರ್ದನ ಪೂಜಾರಿಗೆ ಮಾನಸಿಕ ಹಿಂಸೆ ನೀಡಿರುವುದು ಸಚಿವ ರೈ: ಹರಿಕೃಷ್ಣ ಬಂಟ್ವಾಳ

Friday, May 4th, 2018
bantwal

ಬಂಟ್ವಾಳ: “ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಗೆ ಮಾನಸಿಕ ಹಿಂಸೆ ನೀಡಿರುವುದು ಸಚಿವ ರಮಾನಾಥ ರೈ ಅವರೇ ಹೊರತು ನಾನಲ್ಲ” ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ. ಗುರುವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಅವರಿಗೆ ಮಾನಸಿಕ ಹಿಂಸೆ ನೀಡಿದ್ದರೆ, ಕಳೆದ 35 ವರ್ಷಗಳ ಕಾಲ ಪೂಜಾರಿಯವರ ಜೊತೆಯಲ್ಲಿರುತ್ತಿರಲಿಲ್ಲ ಎಂದರು. ರಮಾನಾಥ ರೈ ಮುಂದೆ ಸದಾ ಕೈ ಕಟ್ಟಿ ನಿಲ್ಲುವ ಬೇಬಿ ಕುಂದರ್ ಎಂಬವರು ರಮಾನಾಥ ರೈ ಅವರ […]

ಎಸ್ ಡಿ ಪಿ‌ ಐ ಗೆ ಹಣ ಕೊಟ್ಟು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ: ಹರಿಕೃಷ್ಣ ಬಂಟ್ವಾಳ

Saturday, April 28th, 2018
harikrishna-bantwal

ಮಂಗಳೂರು: ಎಸ್ ಡಿ ಪಿ ಐ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ. ಕಾಂಗ್ರೆಸ್ ವರದಕ್ಷಿಣೆ ಕೊಟ್ಟು ಎಸ್.ಡಿ.ಪಿ.ಐನೊಂದಿಗೆ ನಿಖಾ‌ ಮಾಡಿದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವರದಕ್ಷಿಣೆ ಕೊಟ್ಟು ಎಸ್ ಡಿ ಪಿ ಐ ನೊಂದಿಗೆ ನಿಖಾ‌ ಮಾಡಿದೆ. ಎಸ್ ಡಿ ಪಿ‌ ಐ ಗೆ ಹಣ ಕೊಟ್ಟು ಹೊಂದಾಣಿಕೆ ಮಾಡಿದೆ ಎಂದು ಸುದ್ದಿ ಹರಿದಾಡುತ್ತಿದೆ. ಇದರ ಹಿಂದೆ ರಮನಾಥ ರೈ ಇದ್ದಾರೆ. ಹಿಂದೊಮ್ಮೆ ‌ರಮನಾಥ ರೈ […]

ಸಚಿವರ ವಿರುದ್ಧ ಮಾತಾಡಿದ್ರೆ…ಬಿಜೆಪಿಯ ಹರಿಕೃಷ್ಣ ಬಂಟ್ವಾಳಗೆ ಮತ್ತೊಂದು ಬೆದರಿಕೆ ಪತ್ರ

Monday, January 29th, 2018
harikrishna-bantwal

ಮಂಗಳೂರು: ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಅವರಿಗೆ ಬರುತ್ತಿರುವ ಬೆದರಿಕೆ ಪತ್ರಗಳ ಸಂಖ್ಯೆ ಹೆಚ್ಚಾಗಿದೆ. ಉಸ್ತುವಾರಿ ಸಚಿವರ ವಿರುದ್ಧ ಮಾಧ್ಯಮಗಳಲ್ಲಿ ಮಾತನಾಡಬಾರದು. ಇದರಿಂದ ಪರಿಣಾಮ ನೆಟ್ಟಗಿರುವುದಿಲ್ಲ ಎಂಬ ಎಚ್ಚರಿಕೆಗಳು ಪ್ರತಿ ಪತ್ರಗಳಲ್ಲೂ ಇವೆ. ಒಂದು ಪತ್ರ ಮುಂಬೈನಿಂದ ಬಂದಿದ್ದರೆ, ಉಳಿದ ಐದು ಪತ್ರಗಳು ಬಿ.ಸಿ.ರೋಡ್‌‌ನಿಂದಲೇ ಪೋಸ್ಟ್ ಆಗಿವೆ ಎನ್ನುತ್ತಾರೆ ಹರಿಕೃಷ್ಣ ಬಂಟ್ವಾಳ. ‘ಉಸ್ತುವಾರಿ ಸಚಿವರ ವಿರುದ್ಧ ಮಾತನಾಡುವುದು ಬಿಟ್ಟು ನಾಯಿಯಂತೆ ಕೂತಿರು’ ಎಂಬ ಬೆದರಿಕೆಯನ್ನು ಪತ್ರದಲ್ಲಿ ಹಾಕಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹರಿಕೃಷ್ಣ ಬಂಟ್ವಾಳ್‌, ‘ಕೇವಲ ನನಗಷ್ಟೇ […]

ಈ ಚುನಾವಣೆಯೇ ರಮಾನಾಥ ರೈ ಕೊನೆಯ ಬಯಲಾಟ ಎಂದ ಹರಿಕೃಷ್ಣ ಬಂಟ್ವಾಳ

Wednesday, January 17th, 2018
harikrishna

ಮಂಗಳೂರು : ಈ ಬಾರಿಯ ಚುನಾವಣೆ ಸಚಿವ ರಮಾನಾಥ ರೈ ಅವರ ಕೊನೆಯ ಬಯಲಾಟ. ರಮಾನಾಥ ರೈ ಮಹಿಷಾಸುರನಾದರೆ, ಜನರು ದೇವಿಯ ರೂಪದಲ್ಲಿ ಅವರನ್ನು ಮುಗಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬಿಲ್ಲವ ಸಮುದಾಯದವರಿಗೆ ಟಿಕೆಟ್ ನೀಡಲಿ ಎಂದು ಸಚಿವ ರಮಾನಾಥ ರೈ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಬಿಲ್ಲವರ ಬಗ್ಗೆ ಮಾತನಾಡುವ ನೈತಿಕತೆ ರಮಾನಾಥ ರೈಗಿಲ್ಲ ಎಂದು ಕಿಡಿ ಕಾರಿದರು. […]

ಹರಿಕೃಷ್ಣ ಬಂಟ್ವಾಳ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿಗೆ ಸೇರ್ಪಡೆ

Friday, November 10th, 2017
harikrishna bantwal

ಮಂಗಳೂರು:ನಗರದ ನೆಹರೂ ಮೈದಾನದಲ್ಲಿ  ಪರಿವರ್ತನಾ ಯಾತ್ರೆಯಲ್ಲಿ ಅಧಿಕೃತವಾಗಿ ನ. 11ರಂದು ಬಿಜೆಪಿಗೆ ಸೇರಲಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ಪತ್ನಿಯ ಮೂಲ ಹೆಸರನ್ನು (ಧನಭಾಗ್ಯ ರೈ) ಮರೆಮಾಚಿ ಶೈಲಾ ಬಿ. ರೈ ಎಂಬ ಹೆಸರಿನಲ್ಲಿ ಮಾಣಿಯಲ್ಲಿ ಜಮೀನು ಖರೀದಿಸಿರುವ ಬಗ್ಗೆ ಹೇಳಿಕೆ ನೀಡಿದ್ದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರು ಈವರೆಗೆ ಮಾಧ್ಯಮದ ಮುಂದೆ ಬಂದು ಹೇಳಿಕೆ ನೀಡಿಲ್ಲ. ಹೀಗಾಗಿ ಇದು ಕೇವಲ ಆರೋಪವಲ್ಲ ಎಂಬುದು ಸಾಬೀತಾಗಿದೆ. ತನ್ನೆಲ್ಲ […]

ಯಾವ ನಿರ್ಧಾರ ಕೈಗೊಳ್ಳಬೇಕೆಂಬ ಸ್ವಂತಿಕೆ ನನ್ನಲ್ಲಿದೆ :ಹರಿಕೃಷ್ಣ ಬಂಟ್ವಾಳ

Tuesday, October 31st, 2017
Harikrishna bantwal

ಮಂಗಳೂರು: ಕಾಂಗ್ರೆಸ್‌‌‌ನ‌ ಮಾಜಿ ಹಿರಿಯ ಮುಖಂಡ ಹರಿಕೃಷ್ಣ ಬಂಟ್ವಾಳ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್‌‌‌ಗೆ, ನಾನು ಭಾರತೀಯ ಬಿಲ್ಲವ. ಕಾಂಗ್ರೆಸ್‌ನ ಬಿಲ್ಲವ ಅಲ್ಲ. ಕಾಂಗ್ರೆಸ್‌ನ ದಾಸ ಬಿಲ್ಲವನೂ ಅಲ್ಲ. ಯಾವ ಪಕ್ಷ ಸೇರಬೇಕು ಎನ್ನುವ ಸ್ವಂತಿಕೆ, ನಿರ್ಧಾರ ನನಗೆ ಬಿಟ್ಟದ್ದು. ಆದರೆ ನೀವು ನನ್ನ ಸುದ್ದಿಗೆ ಬರಬೇಡಿ ಎಂದು ಟಾಂಗ್ ನೀಡಿದ್ದಾರೆ. ಹರಿಕೃಷ್ಣ ಬಂಟ್ವಾಳ ಬಿಜೆಪಿ ಸೇರುವ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಹರೀಶ್ ಕುಮಾರ್‌ ಮಾಧ್ಯಮಗೋಷ್ಠಿ ನಡೆಸಿ ಟೀಕಿಸಿದ್ದರು. ಆದರೆ, ಇದೀಗ ಹರೀಶ್ ಕುಮಾರ್‌ಗೆ ತಿರುಗೇಟು […]

ತಾನೊಬ್ಬ ಸರ್ವಧರ್ಮ ಪ್ರೇಮಿ ಎಂದು ರೈ ಬಿಂಬಿಸುವುದು ಓಟಿಗಾಗಿ ಮಾತ್ರ : ಹರಿಕೃಷ್ಣ ಬಂಟ್ವಾಳ

Wednesday, June 28th, 2017
Harikrishna Bantwal

ಮಂಗಳೂರು : ತಾನೊಬ್ಬ ಸರ್ವಧರ್ಮ ಪ್ರೇಮಿ ಎಂದು ಹೇಳುವ ಸಚಿವ ರಮಾನಾಥ ರೈ, ವಾಸ್ತವದಲ್ಲಿ ಹೃದಯದಿಂದ ಯಾರನ್ನೂ ಪ್ರೀತಿಸುವುದಿಲ್ಲ. ಸಾಮರಸ್ಯವನ್ನು ಬಯಸುವುದಿಲ್ಲ. ಒಂದು ವೇಳೆ ಎಲ್ಲರನ್ನೂ ಪ್ರೀತಿಸಿ, ಸಾಮರಸ್ಯ ಬಯಸುವವರಾಗಿದ್ದರೆ ನಾಲ್ಕು ವರ್ಷದ ಅವಧಿಯಲ್ಲಿ ಎಲ್ಲಾ ಧರ್ಮಗಳ ದರ್ಮಗುರುಗಳನ್ನು ಕರೆಸಿ ಸಾಮರಸ್ಯ ಸಭೆ ನಡೆಸುತ್ತಿದ್ದರು. ಆದರೆ ಅವರು ಧರ್ಮಗುರುಗಳ ಬಳಿ ಹೋಗುವುದು ಓಟಿಗಾಗಿ ಮಾತ್ರ ಎಂದು ಸಾಮಾಜಿಕ ಮುಂದಾಳು ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ. ಪತ್ರಿಕಾಘೋಷ್ಠಿಯಲ್ಲಿ  ಮಾತನಾಡಿದ  ಬಂಟ್ವಾಳ್ ಮುಸ್ಲಿಮರನ್ನು ಓಲೈಸಲು ಅಧಿಕಾರಿಗಳನ್ನು ಕರೆಯಿಸಿ ತನಗೆ ಬೇಕಾದ ಹಾಗೆ […]

ಆರ್.ಎಸ್.ಎಸ್ ಗುರು ಸುದರ್ಶನ್ ಹೇಳಿಕೆಯನ್ನು ಖಂಡಿಸಿ ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

Tuesday, November 16th, 2010
ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಮಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಜಿ ಗುರು ಸುದರ್ಶನ್ ಸೋನಿಯಾಗಾಂಧಿಯವರ ಮೇಲೆ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಬಳಿ ಇಂದು ಬೆಳಿಗ್ಗೆ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತಾನಾಡಿದ ಕಾಂಗ್ರೆಸ್ ಮುಖಂಡ ಹರಿಕೃಷ್ಣ ಬಂಟ್ವಾಳ ಬಿಜೆಪಿ ಮತ್ತು ಆರ್.ಎಸ್.ಎಸ್ ಗಳು ಒಂದೇ ನಾಣ್ಯದ  ಎರಡು ಮುಖಗಳು ಬಿಜೆಪಿ ಮುಖಂಡರು ಬಹಿರಂಗವಾಗಿ ನಾವು ಆರ್.ಎಸ್.ಎಸ್ ಕಾರ್ಯಕರ್ತರು ಎಂದು ಹೇಳುತ್ತಿದ್ದಾರೆ. ಆರ್.ಎಸ್.ಎಸ್ ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ಅವರು […]