ವರ್ಷದ ಮೊದಲ ದಿನ: ಕದ್ರಿ, ಕುದ್ರೋಳಿ ಸೇರಿ ಹಲವು ದೇವಾಲಯಗಳಲ್ಲಿ ಭಕ್ತರಿಂದ ಪೂಜೆ

6:19 PM, Monday, January 1st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Templeಮಂಗಳೂರು: ಹಳೆ ವರ್ಷ ಕಳೆದು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಇಡೀ ವರ್ಷ ಆರೋಗ್ಯ, ನೆಮ್ಮದಿ, ಯಶಸ್ಸು, ಐಶ್ವರ್ಯ ದಯಪಾಲಿಸಲಿ ಎಂಬುದು ಎಲ್ಲರ ಅಭಿಲಾಸೆ. ಯಾವುದೇ ಕಾರ್ಯವನ್ನು ಜನ ಇಂದು ದೇವರ ದರ್ಶನದ ಮೂಲಕ ಆರಂಭಿಸುತ್ತಾರೆ.

ಹಾಗೆಯೇ ಮಂಗಳೂರಿನಲ್ಲೂ ಮಂಗಳಾದೇವಿ, ಕದ್ರಿ ಮಂಜುನಾಥ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲೂ ಭಕ್ತರು ಮುಗಿಬಿದ್ದು ಪೂಜೆ ಸಲ್ಲಿಸುತ್ತಿರುವ ದೃಶ್ಯ ಕಂಡುಬಂತು.

ಬಹುತೇಕ ಎಲ್ಲಾ ದೇವಸ್ಥಾನಗಳಲ್ಲೂ ಇಂದು ವಿಶೇಷ ಪೂಜೆ ನೆರವೇರಿತು. ಭಕ್ತರು ಸಾಮೂಹಿಕ ಸತ್ಯನಾರಾಯಣ ಪೂಜೆ ಕೈಗೊಂಡು ಪ್ರಾರ್ಥನೆ ಸಲ್ಲಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English