ಉದ್ಯಮಿಯ 8 ವರ್ಷದ ಪುತ್ರನ ಅಪಹರಣ, 10 ಕೋಟಿ ಹಣದ ಬೇಡಿಕೆ

6:07 PM, Friday, December 18th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Anubhavಉಜಿರೆ: ಇಂಡಿಕಾ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಉಜಿರೆಯ ರಥಬೀದಿ ನಿವಾಸಿ, ಖ್ಯಾತ ಉದ್ಯಮಿ ಬಿಜೋಯ್ ಯವರ 8 ವರ್ಷದ ಪುತ್ರ ಅನುಭವ್ ನನ್ನು  ಗುರುವಾರ ಸಂಜೆ ಮನೆಯಂಗಳದಿಂದ  ಅಪಹರಿಸಲಾಗಿದ್ದು, ಅಪಹರಣಗಾರರ ಸುಳಿವು ಇನ್ನೂ ಲಭ್ಯವಾಗಿಲ್ಲ. ಆದರೆ ಅಪಹರಣಗಾರರು ಬಾಲಕನ ಬಿಡುಗಡೆಗೆ ರೂ.10 ಕೋಟಿ ಹಣದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಡಿ.17 ರಂದು ಮನೆಯ ಗೇಟಿನ ಬಳಿ ಆಟವಾಡುತ್ತಿದ್ದ ಅನುಭವ್ ನನ್ನು ಇಂಡಿಕಾ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದು, ಈ ಸಂದರ್ಭ ಬಾಲಕನ ತಾತ ಶಿವನ್ ರವರು ಓಡಿ ಬಂದು ಕಾರಿನ ಬಾಗಿಲು ತೆರೆಯಲು ಯತ್ನಿಸುತ್ತಿದ್ದಂತೆ ಅಪಹರಣಗಾರರು ಕಾರು ಚಲಾಯಿಸಿಕೊಂಡು ರಥಬೀದಿ ಮೂಲಕ ಚಾರ್ಮಾಡಿ ಕಡೆ ತೆರಳಿದ್ದರೆನ್ನಲಾಗುತ್ತಿದೆ.

ಅಪಹರಣಕಾರರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.

ಶಿವನ್ ಅವರ ಸೊಸೆಗೆ ಅಪಹರಣಾಗಾರರು ಫೋನ್ ಮಾಡಿ ಮಗುವನ್ನು ಬಿಡಿಸಲು 100 ಬಿಟ್ ಕಾಯಿನ್ ಅಂದರೆ ರೂ.17 ಕೋಟಿ ಬೇಡಿಕೆ ಇಟ್ಟಿದ್ದರೆಂದು ಶಿವನ್ ರವರು ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತೀವ್ರ ಹುಡುಕಾಟದಲ್ಲಿ ನಿರತರಾಗಿದ್ದು, ಅಪಹರಣಗಾರರು ಹಣದ ಬೇಡಿಕೆಯನ್ನು ರೂ.10 ಕೋಟಿಗೆ ಇಳಿಸಿದ್ದಾರೆ.

ಸ್ಥಳಕ್ಕೆ ದ.ಕ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಹಾಗೂ ಬಂಟ್ವಾಳ ವಿಭಾಗದ ಡಿವೈಎಸ್ಪಿ ವೆಲೆಂಟೈನ್ ಡಿ’ಸೋಜ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Anubhav

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English