10ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿ ಇಬ್ಬರಿಂದ ಅತ್ಯಾಚಾರ, ಪ್ರಕರಣ ದಾಖಲು

Friday, October 1st, 2021
Rapist

ಬೆಳ್ತಂಗಡಿ : ಇಬ್ಬರು ಆರೋಪಿಗಳು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಆಕೆ ಗರ್ಭಧರಿಸಲು ಕಾರಣರಾದ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಜೆಸಿಬಿ ಚಾಲಕ ರವೀಂದ್ರ ಹಾಗೂ ಕೊಕ್ರಾಡಿಯ ಯೋಗೀಶ್ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಗ್ರಾಮವೊಂದರ 10ನೇ ತರಗತಿ ವಿದ್ಯಾರ್ಥಿನಿಯನ್ನು ಇವರಿಬ್ಬರು ಬಲತ್ಕಾರವಾಗಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಳಿಕ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಸಿದ್ದಾರೆ ಎಂದು ದೂರಲಾಗಿದೆ. […]

ಉದ್ಯಮಿಯ 8 ವರ್ಷದ ಪುತ್ರನ ಅಪಹರಣ, 10 ಕೋಟಿ ಹಣದ ಬೇಡಿಕೆ

Friday, December 18th, 2020
Anubhav

ಉಜಿರೆ: ಇಂಡಿಕಾ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಉಜಿರೆಯ ರಥಬೀದಿ ನಿವಾಸಿ, ಖ್ಯಾತ ಉದ್ಯಮಿ ಬಿಜೋಯ್ ಯವರ 8 ವರ್ಷದ ಪುತ್ರ ಅನುಭವ್ ನನ್ನು  ಗುರುವಾರ ಸಂಜೆ ಮನೆಯಂಗಳದಿಂದ  ಅಪಹರಿಸಲಾಗಿದ್ದು, ಅಪಹರಣಗಾರರ ಸುಳಿವು ಇನ್ನೂ ಲಭ್ಯವಾಗಿಲ್ಲ. ಆದರೆ ಅಪಹರಣಗಾರರು ಬಾಲಕನ ಬಿಡುಗಡೆಗೆ ರೂ.10 ಕೋಟಿ ಹಣದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಡಿ.17 ರಂದು ಮನೆಯ ಗೇಟಿನ ಬಳಿ ಆಟವಾಡುತ್ತಿದ್ದ ಅನುಭವ್ ನನ್ನು ಇಂಡಿಕಾ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದು, ಈ ಸಂದರ್ಭ ಬಾಲಕನ ತಾತ ಶಿವನ್ ರವರು ಓಡಿ […]

ಕೊರೋನಾ ತಪಾಸಣೆ ವೇಳೆ ಬೈಕ್ ಕಳ್ಳರ ತಂಡವನ್ನು ಪತ್ತೆ ಹಚ್ಚಿದ ಬೆಳ್ತಂಗಡಿ ಪೊಲೀಸರು

Sunday, July 5th, 2020
bike thieves

ಬೆಳ್ತಂಗಡಿ : ತಾಲೂಕಿನ ಸುತ್ತಮುತ್ತ ಸುತ್ತ ಮುತ್ತ ನಿರಂತರ ಬೈಕ್ ಕಳವು ನಡೆಯುತ್ತಿದ್ದು ಈ ಬಗ್ಗೆ ಕಾರ್ಯಾಚರಣೆ ಗಿಳಿದ ಬೆಳ್ತಂಗಡಿ ಪಿಎಸ್ಐ ಶ್ರೀ ನಂದಕುಮಾರ್ ಎಂಎಂ ಮತ್ತು ಸಿಬ್ಬಂದಿಯವರು ಜುಲೈ 4 ರಂದು  ಜೈನ್ ಪೇಟೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ,ಎರಡು ಬೈಕಲ್ಲಿ ಬಂದ ಮೂವರನ್ನು ತಡೆದು ನಿಲ್ಲಿಸಿ ಪರಿಶೀಲಿಸಿ ವಿಚಾರಣೆಗೊಳಪಡಿಸಿದಾಗ ಇತ್ತೀಚೆಗೆ ಬೆಳ್ತಂಗಡಿ ಎಸ್ ಡಿ ಎಂ ಕಲಾ ಭವನದ ಮುಂಭಾಗದ ಮನೆಯಿಂದ ಮತ್ತು ಮೂಡಬಿದಿರೆ ಠಾಣಾ ವ್ಯಾಪ್ತಿಯಿಂದ ಕಳವು ಮಾಡಿರುವ ಬೈಕ್ ಎಂಬುದಾಗಿ ತಿಳಿದು ಬಂತು. […]

ಐದು ವರ್ಷದ ಮಗುವಿಗೆ ಚಿತ್ರ ಹಿಂಸೆ ನೀಡುತ್ತಿದ್ದ ತಾಯಿಯ ಬಂಧನ

Monday, April 21st, 2014
belthangady

ಬೆಳ್ತಂಗಡಿ : ಗುರುವಾಯನಕೆರೆ ಸಮೀಪದ ಪಣೆಜಾಲು ಎಂಬಲ್ಲಿ ತನ್ನ ಐದು ವರ್ಷದ ಮಗುವಿಗೆ ಚಿತ್ರ ಹಿಂಸೆ ನೀಡುತ್ತಿದ್ದ ತಾಯಿಯನ್ನು ಬೆಳ್ತಂಗಡಿ ಪೊಲೀಸರು ರವಿವಾರ ಬಂಧಿಸಿದ್ದು ತಾಯಿಗೆ 1 ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಂದೆ ನಾಪತ್ತೆಯಾಗಿದ್ದಾನೆ. ಕುವೆಟ್ಟು ಗ್ರಾಮದ ಪಣೆಜಾಲುವಿನ ಮಹಮ್ಮದ್‌ ಶಾಫಿ ಹಾಗೂ ಪೌಝಿಯಾ ಆರೋಪಿಗಳಾಗಿದ್ದು ಪೌಝಿಯಾಳನ್ನು ಬಂಧಿಸಲಾಗಿದೆ. ಇವರು ತಮ್ಮ ಐದು ವರ್ಷದ ಮಗು ಫೈಮಾಗೆ ಚಿತ್ರಹಿಂಸೆ ನೀಡುತ್ತಿದ್ದರು. ದೊಣ್ಣೆಯಿಂದ ಕಾಲಿನ ಗಂಟು, ಕೈ, ಮುಖ, ಮೂಗು, ಕತ್ತುವಿಗೆ ಗಾಯವಾಗುವಂತೆ ಹೊಡೆದಿದ್ದರು. ಪಣೆಜಾಲಿನ ರುಬಿಯಾ […]