ಮಂಗಳಾದೇವಿಯಲ್ಲಿ ನವರಾತ್ರಿಯ ಒಂಬತ್ತು ದಿನಗಳಲ್ಲಿಯೂ ದೇವಿಗೆ ವಿಶೇಷ ಅಲಂಕಾರ

9:22 PM, Friday, September 22nd, 2017
Share
1 Star2 Stars3 Stars4 Stars5 Stars
(No Ratings Yet)
Loading...

Mangaladeviಮಂಗಳೂರು : ಮಂಗಳೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಗುರುವಾರ ನವರಾತ್ರಿ ಮಹೋತ್ಸವ ಆರಂಭಗೊಂಡಿ ದೆ.

ಮಂಗಳಾದೇವಿಯಲ್ಲಿ ನವರಾತ್ರಿಯ ಒಂಬತ್ತು ದಿನಗಳಲ್ಲಿಯೂ ದೇವಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ. ಸೆಪ್ಟೆಂಬರ್ 25 ರಂದು ಲಲಿತಪಂಚಮಿ, 26 ರಂದು ಚಂಡಿಕಾ ಹೋಮ ಸಣ್ಣ ರಥೋತ್ಸವ 30 ರಂದು ವಿಜಯದಶಮಿ, ವಿದ್ಯಾರಂಭ, ರಾತ್ರಿ ರಥೋತ್ಸವ ನಡೆಯಲಿದೆ. ಮತ್ತು ಅಕ್ಟೊಬರ್ 1 ರಂದು ಅವಬೃತ ಮಂಗಳ ಸ್ನಾನ ಹಾಗೂ  ನವರಾತ್ರಿ ಮಹೋತ್ಸವದ ಸಮಾರೋಪ ನಡೆಯಲಿದೆ.

ಈ ದೇವಾಲಯವು 9 ನೇ ಶತಮಾನದಲ್ಲಿ ಅಲುಪಾ ರಾಜವಂಶದ ಅತ್ಯಂತ ಪ್ರಸಿದ್ಧ ರಾಜ ಕುಂಡ ವರ್ಮ ನಿಂದ  ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಇದು 9 ನೇ ಶತಮಾನದಲ್ಲಿ ಮತ್ಸ್ಯೇಂದ್ರನಾಥದ ಅಧೀನದಲ್ಲಿ ಇತ್ತು ಎಂಬ  ಇನ್ನೊಂದು ದಂತಕಥೆಯಂತೆ, ಹಿಂದೂ ದೇವತೆ ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಂದಾದ ಪರಶುರಾಮನು ಈ ದೇವಾಲಯವನ್ನು ನಿರ್ಮಿಸಿದನೆಂದು ನಂಬಲಾಗಿದೆ ಮತ್ತು ನಂತರ ಕುಂದವರ್ಮನ್ ನಿಂದ ಅಭಿವೃದ್ಧಿ ಗೊಂಡಿತು.

ಈ ದೇವಾಲಯವನ್ನು ಕೇರಳ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ, ಇದು ದಕ್ಷಿಣ ಭಾರತದ ರಾಜ್ಯವಾದ ಕೇರಳ ಮತ್ತು ಪಶ್ಚಿಮ ಘಟ್ಟಗಳಲ್ಲಿನ ಎಲ್ಲಾ ದೇವಾಲಯಗಳಿಗೆ ಸಾಮ್ಯತೆ ಇದೆ , ಅದರಲ್ಲಿ ಹೆಚ್ಚಿನವು ಮರದಿಂದ ಮಾಡಲ್ಪಟ್ಟಿದೆ. ಪ್ರಧಾನ ಗರ್ಭದಲ್ಲಿರುವ ಮಂಗಳಾದೇವಿ ವಿಗ್ರಹವು  ಕುಳಿತುಕೊಳ್ಳುವ ಭಂಗಿಯಲ್ಲಿದೆ. ಒಳ  ಪೌಳಿಯಲ್ಲಿ ಮಹಾಗಣಪತಿ ಗುಡಿಯಿದೆ, ಹೊರ ಪೌಳಿಯಲ್ಲಿ ನಾಗನ ಕಟ್ಟೆ ಸನಿಹದಲ್ಲಿ ಪರಿವಾರ ದೈವಗಳ ಆರಾಧನೆಯಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English