ಮಂಗಳೂರು: ನಗರದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮನಮೋಹಕ ಆಕಾಶ ಬುಟ್ಟಿಗಳ ಸ್ಪರ್ಧೆ ನಡೆಯಿತು.
ವಿವಿಧ ಪ್ರಕಾರದ ಆಕಾಶ ಬುಟ್ಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸೆಗಣಿ, ವ್ಯಾಲ್ವೇಟ್, ರಬ್ಬರ್ ಬ್ಯಾಂಡ್, ಶಂಖ, ಧಾನ್ಯಗಳು, ಭತ್ತ, ಹುಣಸೆ ಬೀಜ, ಕಡಲೆಕಾಳು, ಕ್ಯಾಸೇಟ್ ರೀಲ್, ಕ್ರೇಯಾನ್ಸ್, ಬಿದಿರಿನ ಕೋಲು, ನ್ಯೂಸ್ ಪೇಪರ್ ಹೀಗೆ ವಿವಿಧ ಪ್ರಕಾರದ ವಸ್ತುಗಳಿಂದ ತಯಾರಿಸಿದ ಆಕಾಶ ಬುಟ್ಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ವಿಭಾಗ ಹೀಗೆ ಮೂರು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಸುಮಾರು ನೂರರಷ್ಟು ಆಕಾಶ ಬುಟ್ಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಆಧುನಿಕ ವಿಭಾಗದ ಹಲವಾರು ಆಕಾಶ ಬುಟ್ಟಿಗಳು ನೋಡುಗರ ಮನಸೆಳೆಯಿತು. ಈ ಬಗ್ಗೆ ಸ್ಪರ್ಧಾಳುಗಳು ಮಾತನಾಡಿ, ಹಲವಾರು ತಿಂಗಳಿನಿಂದ ತುಂಬಾ ಎಚ್ಚರಿಕೆಯಿಂದ ಈ ಆಕಾಶ ಬುಟ್ಟಿಗಳನ್ನು ಮಾಡಬೇಕು ಎಂದು ಹೇಳಿದರು.
ದೀಪಾವಳಿಯ ಸಂಭ್ರಮದಲ್ಲಿ ಕಾರ್ತಿಕ ಮಾಸವಿಡೀ ಆಕಾಶ ಬುಟ್ಟಿಗಳನ್ನು ಮನೆಯ ಮುಂದೆ ತೋರಣವಿಡುವ ಸಂಪ್ರದಾಯ ನಶಿಸದಂತೆ ಪೋಷಣೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ಶ್ಲಾಘನೀಯ.
Click this button or press Ctrl+G to toggle between Kannada and English