ಮುಡಿಪು-ಮೂಳೂರು ರಸ್ತೆ ಅವ್ಯವಸ್ಥೆ ವಿರುದ್ಧ ಎಸ್ಡಿಪಿಐ ಪ್ರತಿಭಟನೆ
Tuesday, March 13th, 2018ಮಂಗಳೂರು: ಮುಡಿಪು ಚೆಕ್ಪೋಸ್ಟ್ನಿಂದ ಮೂಳೂರುವರೆಗಿನ ರಸ್ತೆ ದುರವಸ್ಥೆಯ ವಿರುದ್ಧ ಮಂಗಳೂರು ಕ್ಷೇತ್ರ ಎಸ್ಡಿಪಿಐ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹಾರೀಶ್ ಮಲಾರ್ ಅವರು, ನಾವು ಪ್ರತಿಭಟನೆ ಮಾಡಿದರೆ ರಾಜಕೀಯ ಎಂದು ಆರೋಪಿಸಲಾಗುತ್ತದೆ, ಆದರೆ ಎಂದಿಗೂ ರಾಜಕೀಯಕ್ಕಾಗಿ ಯಾವುದೇ ಹೋರಾಟ ಮಾಡಿಲ್ಲ. ಈಗ ಮಾಡುತ್ತಿರುವ ಪ್ರತಿಭಟನೆಯೂ ಸಮಸ್ಯೆಯ ವಿರುದ್ಧ ಆಗಿದೆ ಎಂದು ಹೇಳಿದರು. ಮುಡಿಪು ಮೂಳೂರು ರಸ್ತೆಯು ಮಂಚಿ, ಕಲ್ಲಡ್ಕ ಸಂಪರ್ಕಿಸುವ […]