ಕದಿರೆಯ ಮಂಜುನಾಥ

Wednesday, January 19th, 2011
ಕದ್ರಿ ದೇವಸ್ಥಾನ

ಮಂಗಳೂರು : ‘ಓಂ ನಮೋ ಭಗವತೇ ಮಂಜುನಾಥಾಯ’ ಎಂಬ ಏಕಾದಶಾಕ್ಷರೀ ಮಂತ್ರವು ಪರಮ ಪಾವನವಾದುದು. ಈ ಮಂತ್ರದ ಬಲದಿಂದ ಸಿದ್ಧರೂ, ಯೋಗಿಗಳೂ ಮಂತ್ರ ಸಿದ್ಧಿಯಿಂದ ವಾಕ್ ಸಿದ್ಧಿಯಿಂದ ಪಡೆದಿದ್ದಾರೆ. ಅವತಾರ ಪುರುಷನಾದ ಪರಶುರಾಮನು ಈ ಮಂತ್ರ ಸಿದ್ಧಿಯಿಂದ ಪರಶಿವನ್ನೊಲಿಸಿಕೊಂಡಿದ್ದನು. ಭಕ್ತರ ಇಷ್ಟಾರ್ಥವನ್ನು ಪೂರೈಸಲು ಅವರವರ ಭಾವಕ್ಕೆ ತಕ್ಕಂತೆ ಒಲಿದುಕೊಳ್ಳುವ ದೇವದೇವನು ಪರಶುರಾಮನಿಗೆ ಮಂಜುನಾಥನಾಗಿ ಒಲಿದುಕೊಂಡಿದ್ದನು. ಭಗವಾನ್ ಮಂಜುನಾಥನು ಕದಲೀ ವನ ಮಧ್ಯದಲ್ಲಿರುವ ರಸಕೂಪದಲ್ಲಿ ಜ್ಯೋತಿರ್ಲಿಂಗ ಸ್ವರೂಪನಾಗಿ ಅವತರಿಸಿದ ಲೀಲೆಯೇ ಈ ಕದಲೀ ಕ್ಷೇತ್ರ ಮಹಾತ್ಮೈಯಾಗಿದೆ. ಈ ಕದಲೀ […]