ದರೋಡೆ ಪ್ರಕರಣ: ಉರ್ವ ಠಾಣಾ ಪೊಲೀಸರಿಂದ ಮೂವರ ಬಂಧನ

Tuesday, January 31st, 2017
Mangalore

ಮಂಗಳೂರು: ಹಲವಾರು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರನ್ನು ಮಂಗಳೂರು ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ಕಸ್ಬ ಬೆಂಗ್ರೆಯ ಸರ್ಪರಾಜ್, ಮುಹಮ್ಮದ್ ಅವೀಝ್, ಮುಹಮ್ಮದ್ ನಿಜಾಮುದ್ದೀನ್‌ ಎಂದು ಗುರುತಿಸಲಾಗಿದೆ. ಬಂಧಿತರಿಂದ 4 ಮೊಬೈಲ್ ಮತ್ತು ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಉರ್ವ ಠಾಣೆ , ಕದ್ರಿ ಠಾಣೆ, ಬಂದರ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣ ಮತ್ತು ಪಣಂಬೂರು ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣದಲ್ಲಿ ಈ ಆರೋಪಿಗಳು ಶಾಮೀಲಾಗಿದ್ದರು ಎಂದು ತಿಳಿದುಬಂದಿದೆ.

66.50 ಲಕ್ಷ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಆರೋಪಿಗಳ ಬಂಧನ

Wednesday, December 28th, 2016
robbery-case

ಮಳವಳ್ಳಿ: ಮಳವಳ್ಳಿ ತಾಲೂಕು ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯ ರಾಮಂದೂರು-ಕರಳಿಕೊಪ್ಪಲು ಮಧ್ಯೆ ನಡೆದ 66.50 ಲಕ್ಷ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಹೆಚ್.ಸುಧೀರ್‌‌ಕುಮಾರ್ ರೆಡ್ಡಿ ತಿಳಿಸಿದರು. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ದೊಡ್ಡಮುಲಗೂಡು ನಿವಾಸಿಗಳಾದ ದಿಲೀಪ ಅಲಿಯಾಸ್ ಜೆಸಿಬಿ ದಿಲೀಪ, ಆನಂದ ಅಲಿಯಾಸ್ ಸಿಸಿ ಟಿವಿ ಆನಂದ, ರಾಜೇಶ ಅಲಿಯಾಸ್ ರಾಜಿ, ಆನಂದ ಅಲಿಯಾಸ್ ಮೈಸೂರಮ್ಮನ ಮಗ ಆನಂದ, ಅಭಿಷೇಕ್ ಅಲಿಯಾಸ್ ಅಭಿ, ಪುರುಷೋತ್ತಮ, ವಾಸು, […]