ಮಂಜೇಶ್ವರ : ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಸರಕಾರಿ ಬಸ್ ಢಿಕ್ಕಿ; ಓರ್ವ ಮೃತ್ಯು, ಇಬ್ಬರು ಗಂಭೀರ

Wednesday, January 29th, 2020
manjeshwar

ಮಂಜೇಶ್ವರ : ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಪಾದಚಾರಿಯೊಬ್ಬರ ಸಹಿತ ಇಬ್ಬರು ಗಂಭೀರ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ಮಂಜೇಶ್ವರದಲ್ಲಿ ನಡೆದಿದೆ. ಮೃತರನ್ನು ಬೈಕ್ ಸವಾರ ಕುಂಜತ್ತೂರು ಮಹಾಲಿಂಗೇಶ್ವರ ನಿವಾಸಿ ಲೊಕೇಶ್ (45) ಎಂದು ಗುರುತಿಸಲಾಗಿದೆ. ಬೈಕ್ ಸಹಸವಾರೆಯಾಗಿದ್ದ ಲೋಕೇಶ್‌ರ ಪತ್ನಿ ಉಪ್ಪಳ ಐಲ ನಿವಾಸಿ ಶೈಲಜಾ(41) ಹಾಗೂ ಅಪಘಾತದಲ್ಲಿ ಸಿಲುಕಿದ್ದ ಪಾದಚಾರಿ ಉದ್ಯಾವರ ಫಸ್ಟ್ ಸಿಗ್ನಲ್ ನಿವಾಸಿ ರವಿ(45) ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ […]

ಅಮಾಯಕ ಪಾದಚಾರಿಯನ್ನು ಬಲಿ ಪಡೆದ ಖಾಸಗಿ ಬಸ್ಸು

Sunday, July 15th, 2018
mookambika bus

ಉಳ್ಳಾಲ : ಅಮಾಯಕ  ಪಾದಚಾರಿಯೋರ್ವರ  ಮೇಲೆ ಬಸ್ ಹರಿದ ಪರಿಣಾಮ ಆತ  ಸ್ಥಳದಲ್ಲೇ ಮೃತಪಟ್ಟ ಘಟನೆ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ ನಡೆದಿದೆ. ಉಳ್ಳಾಲ ಕಡೆಗೆ ಹೋಗುತಿದ್ದ KA 19 C 8549  ನಂಬರಿನ ಮೂಕಾಂಬಿಕಾ ಖಾಸಗಿ ಬಸ್ಸು ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ  ಗಂಭೀರವಾಗಿ ಗಾಯಗೊಂಡ ಅಪರಿಚಿತ ಪಾದಚಾರಿ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.