ಹಿರಿಯಡ್ಕದಲ್ಲಿ ರೌಡಿ ಶೀಟರ್ ಪ್ರವೀಣ್ ಕುಲಾಲ್ ವರ್ವಾಡಿಯ ಬರ್ಬರ ಹತ್ಯೆ

Tuesday, December 20th, 2016
Praveen Kulal

ಉಡುಪಿ: ಇಲ್ಲಿನ ಹಿರಿಯಡ್ಕದಲ್ಲಿ ರೌಡಿ ಶೀಟರ್ ಪ್ರವೀಣ್ ಕುಲಾಲ್ ವರ್ವಾಡಿ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರವೀಣ್‌‌ನನ್ನು ಮೂವರು ದುಷ್ಕರ್ಮಿಗಳು ತಲವಾರು, ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇಂದು ಮಧ್ಯಾಹ್ನ ಸುಮಾರು 12ರ ಸಮಯದಲ್ಲಿ ಹಿರಿಯಡ್ಕದ ದಿಯಾ ಗಾರ್ಡನ್ ಎಂಬ ಬಾರ್‌‌ಗೆ ಪ್ರವೀಣ್ ಬಂದಿದ್ದ. ಅದೇ ಸಮಯದಲ್ಲಿ ಅಲ್ಲಿಗೆ ಒಬ್ಬ ವ್ಯಕ್ತಿ ಆಗಮಿಸಿದ್ದು, ಪರಸ್ಪರ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಅವರಿಬ್ಬರ ಮಧ್ಯೆ ಜಗಳ ಆರಂಭವಾಗಿದೆ. ತಕ್ಷಣ ಬಾರಿನ ಮಾಲೀಕ ಅವರನ್ನು ಹೊರಗೆ […]