ಮಂಗಳೂರು ಪೊಲೀಸ್ ಆಯುಕ್ತರಾಗಿ ವಿಕಾಸ್ ಕುಮಾರ್ ಅಧಿಕಾರ ಸ್ವೀಕಾರ

Monday, June 29th, 2020
vikash-kumar

ಮಂಗಳೂರು : ನಗರದ ನೂತನ ಪೊಲೀಸ್ ಆಯುಕ್ತರಾಗಿ ವಿಕಾಸ್ ಕುಮಾರ್ ಅವರು ಜೂ.29 ರ ಸೋಮವಾರ ಅಧಿಕಾರ ಸ್ವೀಕಾರ ಮಾಡಿದರು. ಡಾ.ಪಿ.ಎಸ್.ಹರ್ಷ ಅವರು ವಾರ್ತಾ ಇಲಾಖೆಯ ಆಯುಕ್ತರಾಗಿ ಬೆಂಗಳೂರಿನಲ್ಲಿ ಅಧಿಕಾರ  ವಹಿಸಿಕೊಂಡಿದ್ದಾರೆ. ಸೋಮವಾರ  ಬೆಳಗ್ಗೆ ನೂತನ ಮಂಗಳೂರು ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ವಿಕಾಸ್ ಕುಮಾರ್ ಅವರು ಹಿಂದೆ ಚಿಕ್ಕಮಂಗಳೂರು ಎಸ್ಪಿಯಾಗಿ, ಆಂತರಿಕ ಭದ್ರತೆ ವಿಭಾಗ, ನಕ್ಸಲ್ ನಿಗ್ರಹದಳದ ಡಿಐಜಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಆ್ಯಕ್ಸಿಸ್‌ ಬ್ಯಾಂಕ್‌ಗೆ ಸೇರಿದ 7.5 ಕೋಟಿ ಅಪಹರಣ, ಮೂವರ ಬಂಧನ

Wednesday, May 17th, 2017
axis-money

ಮಂಗಳೂರು: ಮೇ. 12ರಂದು ಬೆಂಗಳೂರಿನ ಆ್ಯಕ್ಸಿಸ್‌ ಬ್ಯಾಂಕ್‌ಗೆ ಸೇರಿದ ಕೋಟ್ಯಾಂತರ ರೂ. ಹಣದೊಂದಿಗೆ ಪರಾರಿಯಾದ ನಾಲ್ವರಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ  ಚಂದ್ರಶೇಖರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ವಾಹನ ಚಾಲಕ ಕರಿಬಸಪ್ಪ(24), ಗನ್ ಮ್ಯಾನ್ ಪೂವಣ್ಣ(38) ಮತ್ತು ಕಾರ್ಯಪ್ಪ(46) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ 6.50ಕೋಟಿ ಹಣ ವಶಕ್ಕೆ ಪಡೆಯಲಾಗಿದೆ. ನಾಪತ್ತೆಯಾಗಿದ್ದ ಹಣ ಸಾಗಿಸುತ್ತಿದ್ದ ವಾಹನ ಮೈಸೂರಿನಲ್ಲಿ ಪತ್ತೆ… ಹಣದೊಂದಿಗೆ ಸಿಬ್ಬಂದಿ ಪರಾರಿ ಉಳಿದ ಒಂದು ಕೋಟಿ ಸಹಿತ ಇನ್ನೊಬ್ಬ […]