ಅಮಾಯಕ ಪಾದಚಾರಿಯನ್ನು ಬಲಿ ಪಡೆದ ಖಾಸಗಿ ಬಸ್ಸು
Sunday, July 15th, 2018ಉಳ್ಳಾಲ : ಅಮಾಯಕ ಪಾದಚಾರಿಯೋರ್ವರ ಮೇಲೆ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ ನಡೆದಿದೆ. ಉಳ್ಳಾಲ ಕಡೆಗೆ ಹೋಗುತಿದ್ದ KA 19 C 8549 ನಂಬರಿನ ಮೂಕಾಂಬಿಕಾ ಖಾಸಗಿ ಬಸ್ಸು ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅಪರಿಚಿತ ಪಾದಚಾರಿ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.