Blog Archive

ಮಾತು ಪಾಲಿಸದ ಕೇರಳ ಸರ್ಕಾರ : ಅನಿಶ್ಚಿತತೆಯಲ್ಲಿ ಎಂಡೋ ಸಂತ್ರಸ್ತೆಯ ವೈದ್ಯಕೀಯ ಶಿಕ್ಷಣ

Saturday, December 26th, 2015
Endow

ಕಾಸರಗೋಡು: ಎಂಡೋ ದುಷ್ಪರಿಣಾಮದ ವಿರುದ್ಧ ಹೋರಾಟ ನಡೆಸಿ, ಇದೀಗ ಉನ್ನತ ಶಿಕ್ಷಣದ ಕನಸುಹೊತ್ತಿರುವ ಶ್ರುತಿಗೆ ಸರ್ಕಾರ ನೀಡಿರುವ ಭರವಸೆ ಇನ್ನೂ ಈಡೇರಿಲ್ಲ. ಬಡತನದಲ್ಲೇ ಬೆಳೆದು, ವೈದ್ಯೆಯಾಗಬೇಕೆಂಬ ದೀರ್ಘ ಕಾಲದ ಕನಸಿಗೆ ಕೇರಳ ಸರ್ಕಾರ ಎಳ್ಳುನೀರು ಬಿಡುವ ಸನ್ನಾಹದಲ್ಲಿದೆ. ಹೋಮಿಯೋಪತಿ ವೈದ್ಯಕೀಯ ಕಾಲೇಜಿಗೆ ಸೇರ್ಪಡೆಗೊಂಡಿರುವ ಶ್ರುತಿ ಅವರಿಗೆ ಕೇರಳ ಮುಖ್ಯಮಂತ್ರಿ ನಾಲ್ಕು ತಿಂಗಳ ಹಿಂದೆ ವೈದ್ಯಕೀಯ ಶಿಕ್ಷಣದ ಖರ್ಚುವೆಚ್ಚ ಭರಿಸುವ ಭರವಸೆ ನೀಡಿದ್ದು, ಆಶಾಭಾವನೆಯಿಂದ ಶ್ರುರಿಂದಿಗೂ ಇದಿರುನೋಡುತ್ತಿದ್ದಾರೆ. ಜಿಲ್ಲೆಯ ಎಣ್ಮಕಜೆ ಪಂಚಾಯಿತಿ ಪಡ್ರೆ ವಾಣೀನಗರದ ಕುಗ್ರಾಮವೊಂದರಲ್ಲಿ ಎಂಡೋ ದುಷ್ಪರಿಣಾಮಕ್ಕೆ […]