ಮತ್ತೆ ದುಷ್ಕೃತ್ಯ…ಮೂವರು ಯುವಕರ ಮೇಲೆ ತಲ್ವಾರ್ನಿಂದ ಹಲ್ಲೆ
Monday, April 9th, 2018ಮಂಗಳೂರು: ಮೂವರ ಯುವಕರ ಮೇಲೆ ಅಪರಿಚಿತರ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ನಿನ್ನೆ ತಡರಾತ್ರಿ ಇಲ್ಲಿಯ ಬೆಂಗ್ರೆ ಫುಟ್ಬಾಲ್ ಮೈದಾನ ಬಳಿ ಈ ಘಟನೆ ನಡೆದಿದೆ. ಕಸಬ ಬೆಂಗ್ರೆಯ ಅನ್ವೀಝ್, ಸಿರಾಜ್ ಹಾಗೂ ಇಝಾದ್ ಎಂಬುವರ ಮೇಲೆ ತಲವಾರ್ನಿಂದ ದಾಳಿ ನಡೆದಿದೆ. ಘಟನೆಯಲ್ಲಿ ಇವರು ಗಾಯಗೊಂಡಿದ್ದಾರೆ. ಕಸಬ ಬೆಂಗ್ರೆಯಿಂದ ತಣ್ಣೀರುಬಾವಿಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಘಟನೆ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.