ಉಳ್ಳಾಲ ಕೊಲೆ ಯತ್ನ ಆರೋಪಿಯ ಬಂಧನ

Monday, February 12th, 2018
Rajaneesh

ಮಂಗಳೂರು  : ಉಳ್ಳಾಲ ಗ್ರಾಮದ ಮುಕ್ಕಚ್ಚೇರಿಯಲ್ಲಿ ಸಮೂಸಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಮನೆಯಿಂದ ಹೊರಟು ಉಳ್ಳಾಲ ಪೇಟೆಯಲ್ಲಿರುವ ರೆಹಮಾನಿಯಾ ಮಸೀದಿ ಬಳಿಗೆ ರಾತ್ರಿ 10-00 ಗಂಟೆಗೆ ತನ್ನ ಬೈಕ್ ನಲ್ಲಿ ಕೆಲಸದ ನಿಮಿತ್ತ ಬರುತಿದ್ದ ನೌಷಾದ್ ಹುಸೈನ್ ಎಂಬವರಿಗೆ ಬೈಕ್ ನಲ್ಲಿ ಬಂದು ತಲವಾರಿನಿಂದ ಹಲ್ಲೆ ನಡೆಸಿದ ಪ್ರಮುಖ ಆರೋಪಿಯನ್ನು ರೌಡಿ ನಿಗ್ರಹ ದಳ ಸಿಬ್ಬಂದಿ ಗಳು ಸೋಮವಾರ ಬಂಧಿಸಿದ್ದಾರೆ. ಈ ಪ್ರಕರಣದ ಕುರಿತು 2017 ರ ಮಾರ್ಚ್ 26 ರಂದು ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ರಿ […]

ಜುಬೈರ್ ಕೊಲೆ ಪ್ರಕರಣ, ಐವರ ಬಂಧನ

Thursday, October 12th, 2017
zubair

ಮಂಗಳೂರು : ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಜುಬೈರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಅ.4ರಂದು ರಾತ್ರಿ ಜುಬೈರ್‌ನನ್ನು ಉಳ್ಳಾಲ ಮಸೀದಿ ಸಮೀಪ ತಲವಾರಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಜುಬೈರ್ ಸಹೋದರ ಆಸಿಫ್ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಸುಹೈಲ್, ನಿಜಾಮುದ್ಧೀನ್, ಮಹಮ್ಮದ್ ಮುಸ್ತಫಾ, ತಾಜುದ್ದೀನ್ ಹಾಗೂ ಮಂಡಾ ಆಸೀಫ್ ಎಂಬುವರನ್ನು ಬಂಧಿಸಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಟಿ. ಆರ್. ಸುರೇಶ್, ಬಂಧಿತರಲ್ಲಿ ಐವರನ್ನು ನ್ಯಾಯಾಧೀಶರ […]

ಸ್ವ ಕ್ಷೇತ್ರದಲ್ಲಿಯೇ ಖಾದರ್‌ಗೆ ಮುತ್ತಿಗೆ, ಬಂದ ದಾರಿಯಲ್ಲೇ ವಾಪಸ್‌‌ ಹೋದ ಸಚಿವರು!

Saturday, October 7th, 2017
kader

ಮಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯುಟಿ ಖಾದರ್ ಅವರಿಗೆ ತಮ್ಮ ಸ್ವ ಕ್ಷೇತ್ರದಲ್ಲಿಯೇ ಜನರು ಬಹಿಷ್ಕಾರ ಹಾಕಿ, ಹಿಂದಕ್ಕೆ ಕಳುಹಿಸಿದ ಘಟನೆ ನಡೆದಿದೆ. ಉಳ್ಳಾಲದಲ್ಲಿ ಈಚೆಗೆ ಕೊಲೆಯಾದ ಜುಬೇರ್ ಮನೆಗೆ ಭೇಟಿ ನೀಡಲು ಸಚಿವ ಯು.ಟಿ. ಖಾದರ್ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಉಳ್ಳಾಲದ ಮುಕ್ಕಚ್ಚೇರಿಯ ಕಿಲೇರಿಯಾ ನಗರ ಎಂಬಲ್ಲಿರುವ ಜುಬೇರ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲು ಸಚಿವ ಯು.ಟಿ.ಖಾದರ್ ತೆರಳಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಸಚಿವ ಯು.ಟಿ ಖಾದರ್ ಅವರನ್ನು […]

ಉಳ್ಳಾಲ: ರೌಡಿ ಗ್ಯಾಂಗ್‌ ವಿರುದ್ಧ ಸಹಿ ಸಂಗ್ರಹ ಮತ್ತು ದೂರು, ಜುಬೇರ್‌ ಕೊಲೆಗೆ ಕಾರಣ

Friday, October 6th, 2017
juber

ಉಳ್ಳಾಲ: ರೌಡಿ ಗ್ಯಾಂಗ್‌ನಿಂದ ಹತ್ಯೆಗೀಡಾದ ಅಬ್ದುಲ್‌ ಜುಬೇರ್‌ ರೌಡಿ ಗ್ಯಾಂಗ್‌ ವಿರುದ್ಧ ಸಹಿ ಸಂಗ್ರಹಿಸಿ ದೂರು ನೀಡಿದ್ದೇ ಕಾರಣವಾಗಿದ್ದು, ಕೊಲೆ ಬೆದರಿಕೆಯನ್ನು ನಿರ್ಲಕ್ಷಿಸಿದ್ದ ಜುಬೇರ್‌ನ ಸಾವಿನಿಂದ ಇಡೀ ಕುಟುಂಬವೇ ಅತಂತ್ರ ಸ್ಥಿತಿಯಲ್ಲಿದೆ. ಉಳ್ಳಾಲದ ಫಿಶ್‌ಮಿಲ್‌ನಲ್ಲಿ ಇಲೆಕ್ಟ್ರಿಕಲ್‌ ಕೆಲಸ ಮುಗಿಸಿ ಮುಕ್ಕಚ್ಚೇರಿಯ ಮಸೀದಿಯಲ್ಲಿ ನಮಾಝ್ ಮುಗಿಸಿ ಸ್ನೇಹಿತ ಇಲ್ಯಾಸ್‌ನೊಂದಿಗೆ ಬೈಕ್‌ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಸುಹೈಲ್‌ ನೇತೃತ್ವದ ನಾಲ್ವರ ತಂಡ ತಲವಾರಿನಿಂದ ಯದ್ವಾತದ್ವಾ ಹಲ್ಲೆ ನಡೆಸಿ ಪರಾರಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ಜುಬೈರ್‌ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದರು. ಇಲ್ಯಾಸ್‌ ಕೈಗೆ ತಲವಾರಿನ […]

ಉಳ್ಳಾಲ: ದುಷ್ಕರ್ಮಿಗಳಿಂದ ಬ್ಬರ ಮೇಲೆ ಮಾರಣಾಂತಿಕ ಹಲ್ಲೆ

Thursday, October 5th, 2017
death

ಮಂಗಳೂರು: ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ದುಷ್ಕರ್ಮಿಗಳು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಸುಕುಧಾರಿಗಳ ಗುಂಪೊಂದು ಮಚ್ಚು-ಲಾಂಗುಗಳಿಂದ ಇಬ್ಬರ ಮೇಲೆ ಮಾರಣಾಂತಿಕ ದಾಳಿ ಮುಕ್ಕಚ್ಚೇರಿಯಲ್ಲಿ ಬುಧವಾರ ನಡೆಸಿತ್ತು. ಈ ಘಟನೆಯಲ್ಲಿ ಝಬೈರ್ ಮತ್ತು ಇಲ್ಯಾಸ್ ಎಂಬುವವರು ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯುವಾಗ ಜುಬೈರ್‌ ಮಾರ್ಗ ಮಧ್ಯೆ ಅಸುನೀಗಿದ್ದಾನೆ. ಇದೀಗ ದುಷ್ಕರ್ಮಿಗಳ ದಾಳಿ ದೃಶ್ಯ ಸ್ಥಳೀಯ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದ್ದು ಅದು ಲಭ್ಯವಾಗಿವೆ.