Blog Archive

ಗುರುಪುರ ನದಿಗೆ ಇನ್ನೊಂದು ಸೇತುವೆ

Wednesday, March 18th, 2015
Gurupur River

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿಯ ಮರವೂರಿನಲ್ಲಿ ಗುರುಪುರ ನದಿಗೆ ಹೊಸ ಸೇತುವೆ ನಿರ್ಮಿಸುವ ಪ್ರಸ್ತಾವನೆ ಸರಕಾರದ ಪರಿಶೀಲನೆಯಲ್ಲಿದೆ ಎಂದು ಲೋಕೋಪಯೋಗಿ ಸಚಿವ ಡಾ | ಎಚ್‌.ಸಿ. ಮಹದೇವಪ್ಪ ಹೇಳಿದರು. ವಿ.ಪರಿಷತ್‌ನಲ್ಲಿ ಸದಸ್ಯ ಐವನ್‌ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ರಾಜ್ಯ ಹೆದ್ದಾರಿಯ ಕಿ.ಮೀ. 12.98ರ ಮರವೂರು ಸೇತುವೆಯಿಂದ ಕಿ.ಮೀ 16.50 ಕಿ.ಮೀವರೆಗಿನ 3.52 ಕಿ.ಮೀ ಉದ್ದದ ಭಾಗವು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದರು.