Blog Archive

ಕೇಸರಿ ವಸ್ತ್ರ ಹಾಕಿದ್ದಾರೆಂದು ಸಾಧುವಿನ ಹತ್ಯೆ ಮಾಡಿದ ಮತಾಂಧನಿಗೆ ಶಿಕ್ಷೆ ತೀವ್ರ ಗೊಳಿಸುವಂತೆ ಆಗ್ರಹ

Saturday, July 18th, 2020
Kantiprasad

ಅಬ್ದುಲಾಪುರ : ಇಲ್ಲಿಯ ಒಂದು ಶಿವ ದೇವಸ್ಥಾನದ ಕಮಿಟಿಯ ಉಪಾಧ್ಯಕ್ಷ ಹಾಗೂ ಅರ್ಚಕರೆಂದು ಕಾರ್ಯ ಮಾಡುವ ಕಾಂತಿ ಪ್ರಸಾದ ಈ ಸಾಧುವನ್ನು ಮತಾಂಧ ಮುಸಲ್ಮಾನ ಯುವಕರು ಹಾಡುಹಗಲೇ ಹತ್ಯೆ ಮಾಡಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಈ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತದೆ. ಸಾಧು ಕಾಂತಿ ಪ್ರಸಾದ ಇವರು ಕೇಸರಿ ವಸ್ತ್ರವನ್ನು ಹಾಕಿಕೊಂಡಿದ್ದರೆಂದು ಅನಸ ಕುರೈಶಿ ಈ ಮತಾಂಧನು ಅವರನ್ನು ನಿಂದಿಸಿದನು ಹಾಗೂ ಇದನ್ನು ವಿರೋಧಿಸಿದ್ದರಿಂದ ಮತಾಂಧನು ಹಿಗ್ಗಾಮುಗ್ಗಾ ಥಳಿಸುತ್ತಾ ಆ ಸಾಧುವಿನ ಹತ್ಯೆ ಮಾಡಿದನು. ಇದರಿಂದ ಹಿಂದೂ ಬಹುಸಂಖ್ಯಾತ […]

ಅಣ್ಣನ ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ಗುಂಡಿಟ್ಟು ಹತ್ಯೆ ಮಾಡಿದ ಚಿಕ್ಕಪ್ಪ

Thursday, July 16th, 2020
hasan murder

ಹಾಸನ: ಯುವತಿಯೊಬ್ಬಳನ್ನು ಒಂದು ಬಾರಿ ಅಪಹರಿಸಿ ಬುದ್ದಿ ಮಾತು ಹೇಳಿದ್ದರು ಕೇಳದೆ ಎರಡನೇ ಬಾರಿ ಅಪಹರಣಕ್ಕೆ ಯತ್ನಿಸಿದಾಗ  30 ವರ್ಷದ ಯುವಕನನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಆಲೂರು ತಾಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ. ಮಧು (30) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಮಧು ಸೊಪ್ಪಿನಹಳ್ಳಿಯ ನಿವಾಸಿಯಾಗಿದ್ದು, ಇದೇ ಗ್ರಾಮದ ಮತ್ತೊಬ್ಬ ನಿವಾಸಿ ರೂಪೇಶ್ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಮೃತಪಟ್ಟ ಮಧು ಆರೋಪಿ ರೂಪೇಶ್ ಅಣ್ಣನ ಮಗಳನ್ನು ಪ್ರೀತಿಸಿದ್ದು, ಕೆಲ ತಿಂಗಳ ಹಿಂದಷ್ಟೇ ಆಕೆಯನ್ನು ಅಪಹರಿಸಿ ಬೆಂಗಳೂರಿಗೆ ಕರೆದೊಯ್ದಿದ್ದ ಎಂದು ಹೇಳಲಾಗುತ್ತಿದೆ. ಈ ಸಂಬಂಧ […]

ಬಿಜೈ ಯಲ್ಲಿ ಮೆಸ್ಕಾಂ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಬರ್ಬರ ಹತ್ಯೆ

Sunday, September 21st, 2014
Mescom Engineer murder

ಮಂಗಳೂರು : ಇಬ್ಬರು ದುಷ್ಕರ್ಮಿಗಳು ಮೆಸ್ಕಾಂ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಒಬ್ಬರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಸೆಪ್ಟೆಂಬರ್ 21 ರ ಭಾನುವಾರ ಬೆಳಗಿನ ಜಾವ ನಗರದ ಬಿಜೈ ನಲ್ಲಿ ನಡೆದಿದೆ. ಹತ್ಯೆಗೀಡಾದವರನ್ನು ಮೆಸ್ಕಾಂ ಕಾರ್ಪೋರೇಟ್‌ ಕಜೇರಿಯಲ್ಲಿ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಆಗಿರುವ ಜಗದೀಶ್‌ ರಾವ್‌ (55) ಎನ್ನುವವರಾಗಿದ್ದಾರೆ. ರಾತ್ರಿ 2.30 ರ ವೇಳೆಗೆ ಗಾಢ ನಿದ್ದೆಯಲ್ಲಿದ್ದ ಜಗದೀಶ್‌ ಅವರ ಪತ್ನಿ ಅರಚಾಟ ಕೇಳಿ ಎಚ್ಚರಗೊಂಡು ನೋಡಿದಾಗ ಜಗದೀಶ್‌ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಕೂಡಲೇ ನೆರಮನೆವರನ್ನು ಕರೆದು ಆಸ್ಪತ್ರಗೆ […]

ಡಿ.ಸಿ. ಆಪೀಸ್ ಬಳಿ ಡಾ. ನರೇಂದ್ರ ದಾಬೊಲ್ಕರ್ ಹತ್ಯೆ ಖಂಡಿಸಿ ಪ್ರತಿಭಟನೆ

Tuesday, August 27th, 2013
Narenra Dabolkar Murder

ಮಂಗಳೂರು : ಡಾ. ನರೇಂದ್ರ ದಾಬೊಲ್ಕರ್ ಹಂತಕರನ್ನು ಶೀಘ್ರವಾಗಿ ಬಂಧಿಸಬೇಕೆಂದು ಮಂಗಳೂರಿನ ವಿಚಾರವಾದಿ ಸಂಘಟನೆಯ ವತಿಯಿಂದ ನಗರದ ಡಿ.ಸಿ. ಆಪೀಸ್ ಬಳಿ ಆಗಸ್ಟ್ 26ರಂದು ಪ್ರತಿಭಟನೆ ನಡೆಯಿತು. ವಿಚಾರವಾದಿ ಡಾ. ನರೇಂದ್ರ ದಾಬೊಲ್ಕರ್ ಅವರ ತೀವ್ರ ವಿಚಾರಗಳನ್ನು ಸಹಿಸದ ಕೆಲವು ವ್ಯಕ್ತಿಗಳು ಅವರನ್ನು ಮುಗಿಸಿದ್ದಾರೆ, ಆದರೆ ಅವರ ವಿಚಾರಗಳನ್ನು ಎಂದಿಗೂ ಹತ್ಯೆ ಮಾಡಲು ಸಾಧ್ಯವಿಲ್ಲ. ಜನರ ಮೂಡನಂಬಿಕೆಗಳು ತೊಲಗಬೇಕು, ವೈಜ್ಞಾನಿಕ ಮನೋಭಾವ ಬೆಳೆಯಬೇಕೆಂದು ವಿಚಾರವಾದಿ ಸಂಘಟನೆಯ ಮುಖಂಡರಾದ ನರೇಂದ್ರ ನಾಯಕ್ ತಿಳಿಸಿದರು. ನಮ್ಮ ಕೊನೆಯ ಶ್ವಾಸ ಇರುವವರೆಗೆ […]