ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಮೃತ ಅಪ್ಪನ ಕೊನೆಯ ಆಸೆ ನೆರವೇರಿಸಿದ ಮಗಳು

Friday, July 3rd, 2020
anusha bajantri

ಗದಗ :  ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅಪ್ಪ ಮಗಳ ಓದಿನ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಆದರೆ ಮಗಳು ಎಸ್‌ಎಸ್‌ಎಲ್‌ಸಿ ಕೊನೆಯ ಪರೀಕ್ಷೆ ಬರೆಯುವ ದಿನವೇ ಮೃತಪಟ್ಟಿದ್ದಾರೆ. ಅಪ್ಪನ ಆತ್ಮಕ್ಕೆ ನೋವು ಮಾಡಬಾರದು ಎನ್ನುವ ಕಾರಣಕ್ಕೆ ಮಗಳು  ಇಂದು ನಡೆದ ಎಸ್‌ಎಸ್‌ಎಲ್‌ಸಿ ಕೊನೆಯ ಪರೀಕ್ಷೆ ಬರೆದು ಬಂದಿದ್ದಾಳೆ. ಗದಗದ ಬಿಇಒ ಕೆಳದಿಮಠ ಸಮೀಪದ  ಅನುಷಾ ಭಜಂತ್ರಿ ಎಂಬ ವಿದ್ಯಾರ್ಥಿನಿ. ತಂದೆ ಸುರೇಶ್‌ ಎನ್ನುವವರು ಮೂತ್ರಪಿಂಡದ ಸಮಸ್ಯೆಯಿಂದ ಬೆಳಗ್ಗೆ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಮನೆಯಲ್ಲಿ ಎಲ್ಲ ರೀತಿಯ ಸಿದ್ಧತೆಯೂ ನಡೆದಿತ್ತು. ಆದರೆ ಸದಾ ತನ್ನ ಶಿಕ್ಷಣದ ಬಗ್ಗೆ […]