ಕುಂಬಳೆಯ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಪಟ್ಟ ಮತ್ತೋರ್ವನ ಬಂಧನ

Monday, September 27th, 2021
Vishal Rathod

ಕಾಸರಗೋಡು : ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿಯೋರ್ವಳ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಕುಂಬಳೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಿಜಾಪುರದ ಮೂಲದ ವಿಶಾಲ್ ರಾಥೋಡ್ (22) ಎಂದು ಗುರುತಿಸಲಾಗಿದೆ. ಕುಂಬಳೆಯ ಸ್ನೇಹಾ ಎಂಬ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ವಿಶಾಲ್ ನನ್ನು ಬಂಧಿಸಲಾಗಿದೆ. ಸೆ. 17ರಂದು ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ಸ್ನೇಹಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮನೆಯಿಂದ ಲಭಿಸಿದ್ದ ಪತ್ರದಲ್ಲಿ ಇಬ್ಬರ ಮೊಬೈಲ್ ನಂಬ್ರ ಹಾಗೂ ಹೆಸರು ಬರೆದಿಡಲಾಗಿತ್ತು. ಇದನ್ನು ಕೇಂದ್ರೀಕರಿಸಿ ತನಿಖೆ ನಡೆಸಿದ ಕುಂಬಳೆ ಠಾಣಾ ಪೊಲೀಸರು […]