ಮನೆಯ ಮುಂಭಾಗದಲ್ಲಿ ಹಾಕಿದ್ದ ಬಟ್ಟೆಗೆ ಬೆಂಕಿ ಹಚ್ಚಿದ ಆರೋಪ: ಆರೋಪಿ ಬಂಧನ

Wednesday, October 31st, 2018
arrested

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮನೆಯೊಂದರ ಮುಂಭಾಗದ ಸರಿಗೆಯಲ್ಲಿ ಹಾಕಿದ್ದ ಬಟ್ಟೆಗೆ ಬೆಂಕಿ ಹಚ್ಚಿ ಸುಮಾರು 5,000 ರೂ.ನಷ್ಟು ನಷ್ಟಗೊಳಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಣೇಶ್ ಕಲ್ಲಗುಡ್ಡೆ ಬಂಧಿತ ಆರೋಪಿ. ವಿದ್ಯುತ್ ಕಾಂಟ್ರಾಕ್ಟರ್ ಅಶೋಕ್ ಪೂಜಾರಿ ಪುತ್ತೂರು ಗ್ರಾಮದ ಕೆಮ್ಮಿಂಜೆ ಗ್ರಾಮದ ಕೊರಂಗು ನಿವಾಸಿ ಗೋಪಾಲ ಮುಗೇರ ಎಂಬುವರ ಮನೆಗೆ ವೈರಿಂಗ್ ಹಾಗೂ ವಿದ್ಯುತ್ ಸಂಪರ್ಕ ಕೆಲಸ ಮಾಡಿದ್ದರು. ಹೀಗಾಗಿ ಅಶೋಕ್ ಪೂಜಾರಿಗೆ 11,500 ರೂ.ಯನ್ನು ಮುಗೇರ ನೀಡಿದ್ದರು. ಆದರೆ ಈ ಬಗ್ಗೆ ಹೆಚ್ಚುವರಿಯಾಗಿ 4,000 ರೂ. ನೀಡುವಂತೆ […]

ಲಾರಿ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Wednesday, April 25th, 2018
accident

ಉಪ್ಪಿನಂಗಡಿ: ಲಾರಿಯೊಂದು ಢಿಕ್ಕಿ ಹೊಡೆದು ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಪೆದಮಲೆ ಬಳಿ ಬುಧವಾರ ಬೆಳಗ್ಗೆ ನಡೆದಿದೆ. ಪಿಲಿಗೂಡಿನ ಮೂಡಬೈಲ್‌ನ ಅಶೋಕ್ ಪೂಜಾರಿ (29) ಮೃತ ಬೈಕ್ ಸವಾರ. ಇವರು ಉಪ್ಪಿನಂಗಡಿಯಿಂದ ಬೆಳ್ತಂಗಡಿ ಕಡೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಎದುರುಗಡೆಯಿಂದ ಬಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅಶೋಕ್ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ತೂರು ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.