ಪಡೀಲ್ನ ವ್ಯಕ್ತಿ ಆತ್ಮಹತ್ಯೆಗೆ ಯತ್ನ, ಪ್ರಯಾಣಿಕರಿಂದ ರಕ್ಷಣೆ
Friday, October 27th, 2017ಮಂಗಳೂರು:ನೇತ್ರಾವತಿ ಸೇತುವೆ ಮೇಲಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೀರಿಗೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದಾರೆ ಎನ್ನಲಾದ ವ್ಯಕ್ತಿಯೋರ್ವನನ್ನು ಪ್ರಯಾಣಿಕಯೋರ್ವರು ರಕ್ಷಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಪಡೀಲ್ನ ದಯಾನಂದ (43) ಎಂದು ಗುರುತಿಸಲಾಗಿದೆ. ಬಶೀರ್ ಜಪ್ಪು ಎಂಬವರು ಇವರ ರಕ್ಷಣೆ ಮಾಡಿದ್ದಾರೆ. ಗುರುವಾರ ರಾತ್ರಿ ಸುಮಾರು 10ಗಂಟೆಯ ಹೊತ್ತಿಗೆ ದಯಾನಂದ ಅವರು ನೇತ್ರಾವತಿ ನದಿಯ ಸೇತುವೆಯ ಮೇಲೆ ಕುಳಿತು ನೀರಿಗೆ ಹಾರಲು ಯತ್ನಿಸುತ್ತಿದ್ದಾಗ ಅದೇ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಜಪ್ಪುವಿನಿಂದ ಉಳ್ಳಾಲದ ಕಡೆಗೆ ಹೋಗುತ್ತಿದ್ದ ಬಶೀರ್ ವಾಹನವನ್ನು ನಿಲ್ಲಿಸಿ […]