ಪಾಂಡೇಶ್ವರ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Thursday, December 24th, 2020
Pandeshwara Invitation

ಮಂಗಳೂರು : ಜನವರಿ 3, 2021  ರಿಂದ ಜನವರಿ 8, 2021 ರವರೆಗೆ ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಯನ್ನು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ ಬಿಡುಗಡೆ ಗುರುವಾರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು. ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜನವರಿ ಮೂರರಿಂದ ಆರು ದಿನಗಳ ಕಾಲ ವಿವಿಧ ದೈವಿಕ ವಿಧಿ ವಿಧಾನಗಳೊಂದಿಗೆ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶೋತ್ಸವ ಮತ್ತು ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದೆ. ಆಮಂತ್ರಣ ಬಿಡುಗಡೆಯ ಸಂಧರ್ಭದಲ್ಲಿ ವ್ಯವಸ್ಥಾಪನಾ […]

ಕನ್ನಡ ಸಾಹಿತ್ಯ ಸಮ್ಮೇಳನ : ಆಮಂತ್ರಣ ಪತ್ರಿಕೆ ಬಿಡುಗಡೆ

Monday, March 9th, 2020
Ujire

ಉಜಿರೆ : ಪೆರಿಂಜೆ ಗ್ರಾಮದ ಸಂತೃಪ್ತಿ ಭವನದಲ್ಲಿ ಇದೇ 24 ರಂದು ಮಂಗಳವಾರ ನಡೆಯಲಿರುವ ಬೆಳ್ತಂಗಡಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಸ್ವಾಗತ ಸಮಿತಿ ಅಧ್ಯಕ್ಷ ವಿಕಾಸ್ ಜೈನ್, ಜಿಲ್ಲಾ ಪಂಚಾಯಿತಿ ಸದಸ್ಯ ಪಿ. ಧರಣೇಂದ್ರ ಕುಮಾರ್, ಸೋಮಶೇಖರ್ ಶೆಟ್ಟಿ, ವಿದ್ಯಾನಂದ ಕುಮಾರ್, ಡಾ. ಶ್ರೀನಾಥ್ ಎಂ.ಪಿ., ರಾಮಕೃಷ್ಣ ಭಟ್ ಮತ್ತು ಇಸ್ಮಾಯಿಲ್, ಕೆ. ಉಪಸ್ಥಿತರಿದ್ದರು.    

ಪತ್ರಕರ್ತರ 35 ನೇ ರಾಜ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

Monday, March 2nd, 2020
srinivas-poojary

ಮಂಗಳೂರು : ಕರಾವಳಿ ಜಿಲ್ಲೆಯ ಲ್ಲಿ ನಡೆಯುವ ಪತ್ರಕರ್ತರ ಸಮ್ಮೆಳನ ರಾಜ್ಯಕ್ಕೆ ಮಾದರಿ ಸಮ್ಮೇಳನವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶುಭ ಹಾರೈಸಿದ್ದಾರೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಾರ್ಚ್ 7 ಹಾಗೂ ಮಾರ್ಚ್ 8 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನ ದಲ್ಲಿ ನಡೆಯಲಿರುವ ಪತ್ರಕರ್ತರ 35 ನೇ ರಾಜ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಯನ್ನು ಅವರು […]

ಮಣ್ಣಗುಡ್ಡೆ ಗುರ್ಜಿ 150 ನೇ ವರ್ಷಾಚರಣೆ ಆಮಂತ್ರಣ ಪತ್ರಿಕೆ ಬಿಡುಗಡೆ

Monday, August 26th, 2019
Gurji

ಮಂಗಳೂರು : ಶರವು ಶ್ರೀ ಮಹಾಗಣಪತಿ ದೇವರ ದೀಪಾರಾಧನೆಯ ಮಣ್ಣಗುಡ್ಡೆ ಗುರ್ಜಿ ಆಚರಣೆಗೆ ನವಂಬರ್ 24 ರಂದು 150 ವರ್ಷ ಪೂರ್ತಿ ಗೊಳ್ಳುತ್ತಿದ್ದು, ಈ ಸಂಭ್ರಮವನ್ನು ಗುರ್ಜಿ ಸೇವಾ ಸಮಿತಿಯವರು ವಿಜ್ರಂಭಣೆಯಿಂದ ಆಚರಿಸಲು ತೀರ್ಮಾನಿಸಿದ್ದು ಅದರ ಆಮಂತ್ರಣ ಪತ್ರವನ್ನು ಶರವು ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ಆಗಸ್ಟ್ 26 ರಂದು ಬಿಡುಗಡೆಗೊಳಿಸಲಾಯಿತು. ಶರವು ಶ್ರೀ ರಾಘವೇಂದ್ರ ಶಾಸ್ತ್ರಿಗಳು ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಪ್ರಚಾರದ ವೀಡಿಯೋವನ್ನು ಶ್ರೀನಿವಾಸ ಕಾಲೇಜಿನ ಅಧ್ಯಕ್ಷ ಎ.ರಾಘವೇಂದ್ರ ರಾವ್ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು. ದೇವರ […]

ಕಲ್ಕೂರ ಶ್ರೀ ಕೃಷ್ಣ ವೇಷ ಸ್ಪರ್ಧೆ ಆಮಂತ್ರಣ ಪತ್ರಿಕೆ ಲೋಕರ್ಪಣೆ

Tuesday, August 6th, 2019
Krishnavesha

ಮಂಗಳೂರು  : ವರ್ಷಂಪ್ರತಿ ಶ್ರೀ ಕ್ಷೇತ್ರ ಕದ್ರಿಯಲ್ಲಿ ಜರುಗುವ ಕಲ್ಕೂರ ಪ್ರತಿಷ್ಠಾನ – ಶ್ರೀ ಕೃಷ್ಣ ವೇಷ ಸ್ಪರ್ಧೆ – ರಾಷ್ಟ್ರೀಯ ಮಕ್ಕಳ ಉತ್ಸವವು ಇದೇ ತಿಂಗಳ 23ರ ಶುಕ್ರವಾರ ಬೆಳಿಗ್ಗೆ 9.00 ರಿಂದ ರಾತ್ರಿ 9.00 ರ ತನಕ ಜರಗಲಿದ್ದು, ಏಕ ಕಾಲದಲ್ಲಿ 30 ಕ್ಕೂ ಮಿಕ್ಕಿದ ವಿಭಾಗಗಳಲ್ಲಿ ಸ್ಪರ್ಧೆ ಜರುಗಲಿದ್ದು ಈ ಉತ್ಸವದ ಮಾಹಿತಿ ಆಮಂತ್ರಣ ಪತ್ರಿಕೆ ಶಾರದಾ ವಿದ್ಯಾಲಯದಲ್ಲಿ ಸೋಮವಾರ  ಲೋಕರ್ಪಣೆಗೊಂಡಿತು. ಈ ಮಾಹಿತಿ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಲ್ಕೂರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರು […]

ಕದ್ರಿ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Thursday, April 11th, 2019
Kadri Temple

ಮಂಗಳೂರು  : ಕದ್ರಿ ಶ್ರೀ ಮಂಜುನಾಥದೇವಸ್ಥಾನದಲ್ಲಿ ಮೇ 2 ರಿಂದ 11 ರವರೆಗೆ ಜರಗಲಿರುವ ಬ್ರಹ್ಮಕಲಶ, ಮಹಾರುದ್ರಯಾಗ ಹಾಗೂ ಮಹಾ ದಂಡರುದ್ರಾಭಿಷೇಕದ ಆಮಂತ್ರಣ ಪತ್ರಿಕೆಯನ್ನುತಾ 10, ಬುಧವಾರ ಬೆಳಿಗ್ಗೆ  ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಹಾಗೂ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರೂ ಆಗಿರುವ ಎ. ಜಿ. ಶೆಟ್ಟಿಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿಎಸ್. ಪ್ರದೀಪ್‌ಕುಮಾರ್‌ಕಲ್ಕೂರ, ದೇವಳದ ಕಾರ್ಯನಿರ್ವಹಣಾಧಿಕಾರಿಡಾ. ನಿಂಗಯ್ಯ ವಿಠಲ ದಾಸತಂತ್ರಿ, ರಾಮಣ್ಣಅಡಿಗ, ರಾಘವೇಂದ್ರಅಡಿಗ, ಶಶಿಧರ ಹೆಗ್ಡೆ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ದಿನೇಶ್‌ದೇವಾಡಿಗ,ರಂಜನ್‌ಕುಮಾರ್, ಸುರೇಶ್‌ಕುಮಾರ್, ಹರಿನಾಥಜೋಗಿ, ರಾಘವೇಂದ್ರ […]

ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Monday, November 6th, 2017
invitation card

ಮಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಸುಳ್ಯದ ಕೆವಿಜಿ ಕಾನೂನು ಕಾಲೇಜಿನ ಸಭಾಂಗಣದಲ್ಲಿ ನ.೧೬ರಂದು ನಡೆಯಲಿರುವ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಆಮಂತ್ರಣ ಪತ್ರಿಕೆಯನ್ನು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಬಾಳ ಜಗನ್ನಾಥ ಶೆಟ್ಟಿ ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಡಾ.ಯು.ಪಿ.ಶಿವಾನಂದ, ಸಂಚಾಲಕ ಕೆ.ಎಂ.ಮುಸ್ತಫ , ಸಂಘಟನಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ್, ಗೌರವಾಧ್ಯಕ್ಷ ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು.

ಮಿನಿಟಿವಿ’ಯ ಆಮಂತ್ರಣ ಪತ್ರಿಕೆ: ಜನಾರ್ದನರೆಡ್ಡಿ ಅವರ ಏಕೈಕ ಪುತ್ರಿಯ ಮದುವೆಗೆ ಶಿಷ್ಟ ರೀತಿಯ ಆಹ್ವಾನ ಪತ್ರಿಕೆ

Wednesday, October 19th, 2016
janardana-reddy

ಬಳ್ಳಾರಿ: ಗಣಿಧಣಿ ಮಾಜಿ ಸಚಿವ ಜನಾರ್ದನರೆಡ್ಡಿ ಅವರ ಏಕೈಕ ಪುತ್ರಿ ಬ್ರಹ್ಮಿಣಿಯ ಮದುವೆಗೆ ಭರದ ಸಿದ್ಧತೆ ನಡೆದಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಹೈದರಾಬಾದ್‌ ಮೂಲದ ಉದ್ಯಮಿಯ ಪುತ್ರ ರಾಜೀವ್‌ ರೆಡ್ಡಿ ಅವರೊಂದಿಗೆ ನವೆಂಬರ್‌ 16ರಂದು ನಡೆಯಲಿದೆ. ಈ ಮದುವೆಗೆ ರೆಡ್ಡಿ ಕುಟುಂಬ ವಿಶಿಷ್ಟ ರೀತಿಯ ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಿದೆ. ಎಲ್‌ಇಡಿ ಪರದೆ ಮೇಲೆ ರೆಡ್ಡಿ ದಂಪತಿ ಹಾಡಿನ ಮೂಲಕ ಆಹ್ವಾನ ನೀಡುವ ಆಮಂತ್ರಣ ಪತ್ರಿಕೆ ಸಿದ್ಧಪಡಿಸಲಾಗಿದೆ. ಈ ಆಮಂತ್ರಣ ಪತ್ರಿಕೆಯನ್ನು ನಟ, ನಿರ್ದೇಶಕ ಸಾಯಿ ಕುಮಾರ್‌ ನೇತೃತ್ವದಲ್ಲಿ […]