2001ರಲ್ಲಿ ಉಡುಪಿ ಕೃಷ್ಣಮಠದ ರಾಜಾಂಗಣ ಉದ್ಘಾಟಿಸಿದ್ದ ವಾಜಪೇಯಿ
Thursday, August 16th, 2018ಉಡುಪಿ : ಉಡುಪಿ ಪೇಜಾವರ ಶ್ರೀಗಳ ನಾಲ್ಕನೇ ಪರ್ಯಾಯದಲ್ಲಿ ಕೃಷ್ಣಮಠದ ರಾಜಾಂಗಣ ಉದ್ಘಾಟನೆಗೆ ಅಟಲ್ ಬಿಹಾರಿ ವಾಜಪೇಯಿ ಬಂದಿದ್ದರು. ಪೇಜಾವರ ಶ್ರೀಗಳ ಆಹ್ವಾನವನ್ನು ಆದೇಶ ಎಂದು ಪಾಲಿಸಿ ಆ ದಿನ ಉಡುಪಿಗೆ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಂದು ಪ್ರಧಾನ ಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಉಡುಪಿ ಕೃಷ್ಣಮಠದ ರಾಜಾಂಗಣ ಉದ್ಘಾಟನೆ ದೆಹಲಿಯಿಂದ ಉಡುಪಿಗೆ ಬಂದಿದ್ದರು. ವಿಮಾನ ನಿಲ್ದಾಣದಲಿ ಉಡುಪಿಯ ಉದ್ಯಮಿಗಳಾದ ರಾಮದಾಸ ಪೈ, ಸತೀಶ್ ಪೈ, ಕರ್ನಾಟಕ ಬ್ಯಾಂಕಿನ ಅನಂತ ಕೃಷ್ಣ ಭಟ್ ಮೊದಲಾದವರು ಸ್ವಾಗತಿಸಿದ್ದರು. […]