ಉರ್ವಾ ಕೆನರಾ ಪ್ರೌಢ ಶಾಲೆ ಅಧ್ಯಾಪಕ ಹೃದಯಾಘಾತದಿಂದ ನಿಧನ

Sunday, May 23rd, 2021
Ravindranath

ಮಂಗಳೂರು: ಕೆನರಾ ಪ್ರೌಢ ಶಾಲೆ ಉರ್ವಾದ ಅಧ್ಯಾಪಕ ಬಹುಮುಖ ಪ್ರತಿಭೆ ರವೀಂದ್ರನಾಥ ಶೆಟ್ಟಿ(44) ಅವರು ಹೃದಯಾಘಾತದಿಂದ ಭಾನುವಾರ  ನಿಧನರಾದರು. ಮೂಲತಃ ಬಾಕ್ರಬೈಲಿನವರಾಗಿರುವ ಅವರು ಕೆನರಾ ಪ್ರೌಢ ಶಾಲೆಯಲ್ಲಿ ಸುಮಾರು 9  ವರ್ಷಗಳಿಂದ  ಅಧ್ಯಾಪಕರಾಗಿದ್ದರು. ಎಂಎ, ಎಂಫಿಲ್ ಪದವೀಧರರಾಗಿದ್ದು, ಎನ್‌ಸಿಸಿ ಅಧಿಕಾರಿಯೂ ಆಗಿದ್ದರು. ಎನ್‌ಸಿಸಿಯ ಸಾಧನೆಗಾಗಿ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಯಕ್ಷಗಾನ ಮತ್ತು ರಂಗಭೂಮಿ ಕಲಾವಿದರಾಗಿದ್ದ ಅವರು, ಉತ್ತಮ‌ ಕಾರ್ಯಕ್ರಮ‌‌ ನಿರ್ವಾಹಕರೂ ಆಗಿ ಜನಮೆಚ್ಚುಗೆ ಗಳಿಸಿದ್ದರು. ಪತ್ನಿ ದಿವ್ಯಾ, ಮೂರು ವರ್ಷದ ಮಗು ಸೇರಿದಂತೆ ಅಪಾರ ಬಂಧು […]

ಮಂಗಳೂರು : 50 ವರ್ಷದ ಗುತ್ತಿಗೆದಾರ ಬಾವಿಗೆ ಹಾರಿ ಆತ್ಮಹತ್ಯೆ

Saturday, September 7th, 2019
jaya-alwa

ಮಂಗಳೂರು : ನಗರದ ಕೊಟ್ಟಾರದಲ್ಲಿ 50 ವರ್ಷದ ಗುತ್ತಿಗೆದಾರರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ.6 ರಂದು ಶುಕ್ರವಾರ ರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೊಟ್ಟಾರ ನಿವಾಸಿ ಜಯಕರ ಆಳ್ವಾ (50) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಮಲಗಿದ್ದ ಪತಿ ಶನಿವಾರ ಬೆಳಗ್ಗೆ ನಾಪತ್ತೆಯಾಗಿರುವುದನ್ನು ಗಮನಿಸಿ ಹುಡುಕಾಟ ಆರಂಭಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 6 ರಂದು ರಾತ್ರಿ ಮನೆಮಂದಿ ಮಲಗಿದ್ದ ಸಂದರ್ಭ ಜಯ ಆಳ್ವಾ ಮನೆಯ ಹಿಂಬಾಗಿಲಿನಿಂದ ಹೊರಗೆ ಹೋಗಿ ತಮ್ಮ ಮನೆಯ ಸನಿಹವಿರುವ ಬಾವಿಗೆ […]

ಉರ್ವ ಹೊಸ ಮಾರುಕಟ್ಟೆಯಿಂದ 15 ಕ್ಕೂ ಅಧಿಕ ಸಿಲಿಂಗ್ ಫ್ಯಾನ್’ಗಳು ಕಳವು

Monday, August 26th, 2019
urva

ಮಂಗಳೂರು : ನೂತನವಾಗಿ ಉದ್ಘಾಟನೆಗೊಂಡು, ಇನ್ನೂ ಸಾರ್ವಜನಿಕವಾಗಿ ಲೋಕಾರ್ಪಣೆಗೊಳ್ಳದ , ನಗರದ ಉರ್ವದಲ್ಲಿರುವ ನೂತನ ಮಾರುಕಟ್ಟೆಯಿಂದ ಹೆಚ್ಚು ಕಡಿಮೆ 15 ಕ್ಕೂ ಹೆಚ್ಚು ಸಿಲಿಂಗ್ ಫ್ಯಾನ್’ಗಳನ್ನು ಕಳ್ಳರು ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಮಾರುಕಟ್ಟೆ ಈ ವರ್ಷದ ಜನವರಿ 27 ರಂದು ಅಂದು ಉಸ್ತುವಾರಿ ಸಚಿವರಾಗಿದ್ದ ಯು.ಟಿ ಖಾದರ್ ಉದ್ಘಾಟಿಸಿದ್ದರು. ಹೊಸ ಮಾರುಕಟ್ಟೆ ಮತ್ತು ವಾಣಿಜ್ಯ ಸಂಕೀರ್ಣವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮತ್ತು ಮಂಗಳೂರು ನಗರ ನಿಗಮ (ಎಂಸಿಸಿ) ಜಂಟಿಯಾಗಿ ನಿರ್ಮಿಸಿತ್ತು. 5,400 ಚದರ […]