‘ಶಬರಿ’ ಕನ್ನಡ ನಾಟಕ ಸಾಹಿತ್ಯ ಪುಸಕ್ತ ಬಿಡುಗಡೆ
Saturday, April 7th, 2018ಉಡುಪಿ: ಉಡುಪಿ ಶ್ರೀಕೃಷ್ಣ ಮಠ ಹಾಗೂ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಲೇಖಕ ಡಾ.ಭಾಸ್ಕರಾನಂದ ಕುಮಾರ್ ಅವರ ಶಬರಿ ಕನ್ನಡ ನಾಟಕ ಸಾಹಿತ್ಯ ಪುಸಕ್ತ ಬಿಡುಗಡೆ ಸಮಾರಂಭವು ಶುಕ್ರವಾರ ರಾಜಾಂಗಣದಲ್ಲಿ ಜರಗಿತು. ಕೃತಿಯನ್ನು ಬಿಡುಗಡೆಗೊಳಿಸಿದ ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಶಬರಿ ಕಥೆಯನ್ನು ಆರಿಸಿಕೊಂಡು ಕೃತಿ ರಚಿಸಿರುವ ಪರಿ ಉತ್ತಮವಾಗಿದೆ. ದೃಶ್ಯ ಮಾಧ್ಯಮಕ್ಕೆ ಅಳವಡಿಸಲು ಇದು ಸೂಕ್ತವಾಗಿದೆ. ಒಬ್ಬ ಸೂತ್ರಧಾರರನ್ನು ಬಳಸಿಕೊಂಡು ಹೆಣೆಯಲ್ಪಡುವ ನಾಟಕ ಸನ್ನಿವೇಶಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತವೆ ಎಂದು ಹೇಳಿದರು. […]