ಮಂಗಳೂರು ತಾಪಂ ಮಾಜಿ ಸದಸ್ಯನ ಮೇಲೆ ಕುಲಶೇಖರ ಬಳಿ ತಲವಾರು ದಾಳಿ

Tuesday, October 13th, 2020
Yusuf

ಮಂಗಳೂರು : ದುಷ್ಕರ್ಮಿಗಳ ತಂಡವೊಂದು ಉಳಾಯಿಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಮಂಗಳೂರು ತಾಪಂ ಮಾಜಿ ಸದಸ್ಯ ಯೂಸುಫ್ ಅವರ ಮೇಲೆ ತಲವಾರು ದಾಳಿ ನಡೆಸಿದ ಘಟನೆ ಕುಲಶೇಖರ ಬಳಿ ಸೋಮವಾರ ಸಂಜೆ ನಡೆದಿದೆ. ಗಾಯಗೊಂಡ ಯೂಸುಫ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನ ಕಾರಿನಲ್ಲಿ ಮಂಗಳೂರಿನಿಂದ ಉಳಾಯಿಬೆಟ್ಡುವಿಗೆ ಯೂಸುಫ್ ಅವರು ತೆರಳುತ್ತಿದ್ದಾಗ ಕುಲಶೇಖರ ಬಳಿ ಬೈಕೊಂದು ಯೂಸುಫ್‌ರ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ತಕ್ಷಣ ಯೂಸುಫ್‌ ತನ್ನ ಕಾರನ್ನು ನಿಲ್ಲಿಸಿ ಪ್ರಶ್ನಿಸಿದಾಗ ಬೈಕ್ ಸವಾರ […]

ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಕೋಟಿ ರೂ. ಹಣ ವಶ

Friday, December 8th, 2017
1crore

ಮಂಗಳೂರು: ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಒಂದು ಕೋಟಿ ರೂ. ಹಣ ಸಾಗಾಟ ಮಾಡುತ್ತಿದ್ದ ಮೂವರನ್ನು ಮಂಗಳೂರು ಕಂಕನಾಡಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಲಾ ನಗರ್ ನಿವಾಸಿ ತಾನಾಜಿ (54), ಬೆಳಗಾವಿಯ ಅಥಣಿ ತಾಲೂಕಿನ ದಿನೇಶ್ (20) ಮತ್ತು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕುಮಾತಾ ಎಂಬಲ್ಲಿನ ಅಮುಲ್ ಮಾಲಿ (29) ಎಂಬುವರೇ ಬಂಧಿತರು. ಗುರುವಾರ ತಡರಾತ್ರಿ ಕಂಕನಾಡಿ ವ್ಯಾಪ್ತಿಯಲ್ಲಿ ಪೊಲೀಸ್ ನಿರೀಕ್ಷಕ ರವಿ ನಾಯ್ಕ್ ನೇತೃತ್ವದ ತಂಡ ಇವರನ್ನು ಬಂಧಿಸಿದೆ. ಗಸ್ತಿನಲ್ಲಿದ್ದ ಪೊಲೀಸರು ಕಾರನ್ನು […]