ರಾಜ್ಯ ಸರಕಾರದ ವಿರುದ್ಧ ಸಂಘ ಪರಿವಾರದಿಂದ ಪ್ರತಿಭಟನೆ

Wednesday, October 11th, 2017
kadri

ಮಂಗಳೂರು: ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಇಂದು ಕದ್ರಿ ಸರ್ಕೂಟ್ ಹೌಸ್ ಎದುರುಗಡೆ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮನಪಾ ಸದಸ್ಯೆ ರೂಪಾ ಡಿ. ಬಂಗೇರ, ಹಿಂಜಾವೇ ಜಿಲ್ಲಾ ಸಂಚಾಲಕ ಅಮಿತ್ ಕುಮಾರ್, ಸಹ ಸಂಚಾಲಕ ಸಂದೀಪ್ ಅಂಬ್ಲಮೊಗರು, ಕದ್ರಿ ನಗರ ಸಂಚಾಲಕ ಹರೀಶ್ ಜೋಗಿಮಠ ಮತ್ತಿತರರು ಉಪಸ್ಥಿತರಿದ್ದರು.