ಮಂಗಳೂರು ಬಿಷಪ್ ರನ್ನು ಬೇಟಿ ಮಾಡಿದ ಕಾಸರಗೋಡು ಲೋಕಸಭಾ ಅಭ್ಯರ್ಥಿ ಸಿದ್ದೀಕ್

Monday, April 7th, 2014
Siddiq Kasargod

ಮಂಗಳೂರು : ಕಾಸರಗೋಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಸಿದ್ದೀಕ್ ರವರು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಗುರು ಬಿಷಪ್ ಡಾ. ಅಲೋಸಿಯಸ್ ಪೌಲ್ ಡಿ.ಸೋಜರವರನ್ನು ಮಂಗಳೂರು ಬಿಷಪ್ ಹೌಸ್ನಲ್ಲಿ ಭೇಟಿಯಾಗಿ ಅವರ ಆಶೀರ್ವಚನ ಪಡೆದರು. ಅವರೊಂದಿಗೆ ಕೇರಳ ಸರಕಾರದ ಗ್ರಾಮೀಣವೃದ್ಧಿ, ಸಂಸ್ಕೃತಿ, ಯೋಜನೆ ಮತ್ತು ಎನ್.ಆರ್.ಐ. ಸಚಿವರಾದ ಶ್ರೀ ಕೆ.ಸಿ.ಜೋಸೆಫ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಜೆ.ಆರ್. ಲೋಬೊ, ಕಾಸರಗೋಡು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀಧರನ್ ಮೊದಲಾದವರು ಉಪಸ್ಥಿತರಿದದರು.